ಬಳಂಜ: ಶ್ರೀ ಕೊಡಮಣಿತ್ತಾಯ ದೈವಕ್ಕೆ ಪಲ್ಲಕ್ಕಿ ಸಮರ್ಪಣೆ

0

ಬಳಂಜ: ಶ್ರೀ ಕೊಡಮಣಿತ್ತಾಯ ದೈವದ ಪಲ್ಲಕ್ಕಿ ನಿರ್ಮಾಣ ಸಮಿತಿ ಮತ್ತು ಬಳಂಜ – ನಾಲ್ಕೂರು ಗ್ರಾಮಸ್ಥರ ವತಿಯಿಂದ ನಿರ್ಮಿಸಲಾಗಿರುವ ನೂತನ ಪಲ್ಲಕ್ಕಿಯನ್ನು ಜ.27 ರಂದು ಬೆಳಗ್ಗೆ ಬಳಂಜ ಗುತ್ತಿನ ಮನೆಯಲ್ಲಿ ಗ್ರಾಮ ದೈವ ಕೊಡಮಣಿತ್ತಾಯಗೆ ಸಮರ್ಪಿಸಲಾಯಿತು. ಈ ಸಂಬಂಧ ವೈದಿಕ ವಿಧಿವಿಧಾನಗಳು ಜರುಗಿದವು.

ಈ ಸಂದರ್ಭದಲ್ಲಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸ್ವರ ಶೀತಲ್ ಪಡಿವಾಳ್, ಪ್ರಮೋದ್ ಕುಮಾರ್ ಜೈನ್, ಚಿತ್ತರಂಜನ್ ಹೆಗ್ಡೆ, ಪಲ್ಲಕ್ಕಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗಣೇಶ್ ಬಿ.ಕೆ , ಕಾರ್ಯದರ್ಶಿ ಪ್ರವೀಣ್ ಲಾಂತ್ಯರು, ಪ್ರಗತಿ ಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ಅರುಣ್ ಹೆಗ್ಡೆ ಕುಳೆಂಜಿರೋಡಿ ಗುತ್ತು, ಗುರಿಕಾರರಾದ ಗಣೇಶ್ ಬೋಂಟ್ರೋಟ್ಟು, ರವೀಂದ್ರ ಹೇವ, ನಾರಾಯಣ ಪೂಜಾರಿ, ಶ್ಯಾಮ್ ಬಂಗೇರ ಪೆರಾಜೆ, ಸೀತಾರಾಮ್ ಡೆಪ್ಪುನಿ, ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here