ಬೆಳ್ತಂಗಡಿ: ಉಪವಿಭಾಗ ವ್ಯಾಪ್ತಿಯ ಶಿರ್ಲಾಲು ಹೊಸ 11ಕೆವಿ ಫೀಡರಿನ ಕಾಮಗಾರಿಯನ್ನು ನಿರ್ವಹಿಸಲು ಹಾಗೂ 11ಕೆವಿ ಹೆಚ್.ಟಿ. ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವ ಪ್ರಯುಕ್ತ ಬೆಳ್ತಂಗಡಿ ಪೇಟೆ, ಚರ್ಚ್ ರೋಡ್, ಸಂತೆಕಟ್ಟೆ, ಲಾಯಿಲ, ವಾಣಿ ಶಾಲೆ ಹತ್ತಿರ, ಬಂಗಾಡಿ, ಇಂದಬೆಟ್ಟು, ಕೊಲ್ಲಿ, ಗುರುವಾಯನಕೆರೆ, ಪಡಂಗಡಿ, ಸೋಣಂದೂರು, ಕುವೆಟ್ಟು, ಅಳದಂಗಡಿ, ನಾರಾವಿ, ಕುತ್ತೂರು ಹಾಗೂ ಆಸುಪಾಸು ಪ್ರದೇಶಗಳಲ್ಲಿ ಸೆ.25ರಂದು ಬೆಳಿಗ್ಗೆ ಗಂಟೆ:10.00ರಿಂದ ಸಂಜೆ ಗಂಟೆ:5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಇಲಾಖೆ ಪತ್ರಿಕೆ ಪ್ರಕಟಣೆ ತಿಳಿಸಿದೆ.