ಕೊಕ್ಕಡ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಕುಟುಂಬಕ್ಕೆ-ಸರಕಾರ ಮತ್ತು ಇಲಾಖೆ ಎಲ್ಲಾ ರೀತಿಯ ನೆರವು ನೀಡಬೇಕು- ಕಿರಣ್ ಚಂದ್ರ ಪುಷ್ಪಗಿರಿ

0

ಕೊಕ್ಕಡ: ಸೌತಡ್ಕ ಗೇರು ತೋಪಿನ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭದಲ್ಲಿ ಕಾಡಾನೆ ದಾಳಿಯಿಂದ ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ ಮೃತರಾಗಿದ್ದು, ವಿಷಯ ತಿಳಿದ ಕಿರಣ್ ಚಂದ್ರಪುಷ್ಪಗಿರಿ ಅವರು ಸಂತಾಪ ಸೂಚಿಸಿದ್ದು, ಮನೆಯವರಿಗೆ ಸರಕಾರ ಎಲ್ಲಾ ರೀತಿಯ ನೆರವು ನೀಡಬೇಕು. ಹಾಗೆಯೇ ಆನೆಯನ್ನು ಅಲ್ಲಿಂದ ಹಿಡಿದು ದೂರದ ಕಾಡಿಗೆ ಬಿಡಬೇಕು, ಇಲ್ಲದಿದ್ದರೆ ಆ ಭಾಗದಲ್ಲಿ ಇನ್ನು ಹೆಚ್ಚಿನ ಅಪಾಯ ಆಗುವ ಸಂಭವ ಇದೆ ಎಂದು ಸಚಿವರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here