ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11ಕೆವಿ ಪೀಡರುಗಳ ಜಿ.ಓ.ಎಸ್ ಗಳ ರಿಪೇರಿ ಕಾರ್ಯ ಹಾಗೂ ಹೆಚ್.ಟಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ಜು.10 ರಂದು ಗುರುವಾಯನಕೆರೆ, ಶಕ್ತಿನಗರ, ಗೇರುಕಟ್ಟೆ, ಜಾರಿಗೆಬೈಲು, ವಾಣಿ ಶಾಲೆ, ಚರ್ಚ್ ರೋಡ್, ಸಂತೆಕಟ್ಟೆ, ಬೆಳ್ತಂಗಡಿ ಪೇಟೆ, ಲಾಯಿಲ, ಬಂಗಾಡಿ, ನಾವೂರು, ಇಂದಬೆಟ್ಟು, ಕೊಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಇಲಾಖೆ ಪತ್ರಿಕೆ ಪ್ರಕಟಣೆ ತಿಳಿಸಿದೆ.