ಬೆಳ್ತಂಗಡಿ: ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಮುಖೇಶ್ ರಾಜ್ ಪುರೋಹಿತ್ ಅವರು ಪತ್ನಿ ಸಹಿತ ಜೂ.27ರಂದು ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸೌತಡ್ಕ ಕ್ಷೇತ್ರದಲ್ಲಿ ನ್ಯಾಯಮೂರ್ತಿ ಅವರು ರಂಗಪೂಜೆ ನೆರವೇರಿಸಿದರು. ಇದರ ಮೊದಲು ಧಾರಾಕಾರ ಮಳೆ ಸುರಿಯುತ್ತಿದ್ದರೂ ಬಯಲು ಆಲಯದಲ್ಲಿ ರಂಗಪೂಜೆ ನಡೆಸುವ ವೇಳೆ ಮಳೆ ಬಿಡುವು ನೀಡಿತ್ತು. ಇದಕ್ಕೆ ನ್ಯಾಯಮೂರ್ತಿ ಸಂತಸ ಪಟ್ಟರು. ಈ ವೇಳೆ ಖ್ಯಾತ ವಕೀಲ ಮಹೇಶ್ ಕಜೆ ಉಪಸ್ಥಿತರಿದ್ದರು. ಸಂಜೆ ನ್ಯಾಯಮೂರ್ತಿಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.