ಕುಕ್ಕಾವು-ಕೊಪ್ಪದಗಂಡಿ ಅಣೆಕಟ್ಟು ರಸ್ತೆ ಬಂದ್

0

ಬೆಳ್ತಂಗಡಿ: ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ನದಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮಿತ್ತಬಾಗಿಲು ಹಾಗೂ ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಾವು- ಕೊಪ್ಪದಗಂಡಿಯ ಮಧ್ಯೆ ಹರಿಯುವ ನೇತ್ರಾವತಿ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನ ಮೇಲಿರುವ ಕಿರು ಸೇತುವೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಸರ್ಕಾರದ ವಿಪತ್ತು ನಿರ್ವಹಣೆ ಕಾಯಿದೆಯಡಿಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರು ಕಾಲ್ನಡಿಗೆ ಹಾಗೂ ವಾಹನದಲ್ಲಿ ದಾಟುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಕಡೆಗಣೆಸಿದಲ್ಲಿ ವಿಪತ್ತು ನಿರ್ವಹಣೆ ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಿತ್ತಬಾಗಿಲು ಹಾಗೂ ಕಡಿರುದ್ಯಾವರ ಗ್ರಾಮ ಪಂಚಾಯತ್ ಸೂಚನಾ ಫಲಕ ಆಳವಡಿಸಿದೆ.

LEAVE A REPLY

Please enter your comment!
Please enter your name here