ಬೆಳ್ತಂಗಡಿ: ತಾಲೂಕಿನ ಬಾರ್ಯ ಗ್ರಾಮದ ನಿವಾಸಿ ಅಜಯ್ ಜೋಹಾನ್ ಬ್ರಾಗ್ಸ್ ಅವರು ಎಸ್.ಎಸ್.ಬಿ ಸಂದರ್ಶನದಲ್ಲಿ ಉತ್ತೀರ್ಣಗೊಂಡು ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದಾರೆ. ಜು. 14ರಂದು ಕಾರ್ಯನಿರ್ವಾಹಕ ಶಾಖೆ (ಸಾಮಾನ್ಯ ಸೇವೆ)ಗಾಗಿ ಎಜಿಮಲಾದ ಭಾರತೀಯ ನೌಕಾ ಅಕಾಡೆಮಿಗೆ ಸೇರಲಿರುವ ಅಜಯ್ ಜೋಹಾನ್ ಬ್ರಾಗ್ಸ್ ಜೂ.26ರಂದು ಶಾಸಕ ಹರೀಶ್ ಪೂಂಜ ಅವರನ್ನು ಭೇಟಿ ಮಾಡಿದರು. ಶಾಸಕರು ಅವರನ್ನು ಅಭಿನಂದಿಸಿದರು.