ನಾರಾವಿ ಪ್ರಾ. ಕೃ. ಪ. ಸ. ಸಂಘದಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

0

ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಾರಾವಿ, ಕುತ್ತೂರು, ಸುಕ್ಕೇರಿ, ಕೊಕ್ರಾಡಿ, ಸಾವ್ಯ ಗ್ರಾಮದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಜೂ.10ರಂದು ನಾರಾವಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ, ಮೂಡಬಿದ್ರೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಜಯಂತ್ ಕೊಟ್ಯಾನ್, ನಾರಾವಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್, ನಾರಾವಿ ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ಸುಧಾಕರ ಭಂಡಾರಿ, ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಸದಸ್ಯರಾದ ರಾಜೇಂದ್ರ ಕುಮಾರ್, ಸುಜಲತಾ, ಸುಪ್ರಿಯಾ, ಪದ್ಮಶ್ರೀ, ಸದಾನಂದ ಗೌಡ, ಉಮೇಶ್ ಎಂ.ಕೆ., ಕೃಷ್ಣಪ್ಪ ಪೂಜಾರಿ, ಯಶೋಧ ಕುತ್ತೂರು, ಶೇಖರ, ವಿಠಲ ಪೂಜಾರಿ ಉಪಸ್ಥಿತರಿದ್ದರು.

ಹಲವರಿಂದ ನೆರವು: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2 ಲಕ್ಷ ವೆಚ್ಚದ ಉಚಿತ ಬರೆಯುವ ಪುಸ್ತಕವನ್ನು ನೀಡಲಾಯಿತು. ಎಸ್.ಕೆ.ಡಿ.ಆರ್.ಪಿ ವತಿಯಿಂದ 20 ಬೆಂಚ್ ಮತ್ತು ಡೆಸ್ಕ್ ನೀಡಲಾಯಿತು. ಸುರಿಯ ಶ್ರೀ ಫ್ರೆಂಡ್ಸ್ ಅರಸಿಕಟ್ಟೆ ಅವರಿಂದ ಶಾಲೆಗೆ ಟೈಲ್ಸ್ ನೀಡಲಾಯಿತು. ಶಾಲೆಯ ಅಭಿವೃದ್ಧಿಗೆ ರೂ. 1,25,000 ಸಾವಿರ ಮೂಡಬಿದ್ರೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ನೀಡಿದ್ದಾರೆ. ನಾರಾವಿ ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್ ಉಪಸ್ಥಿತರಿದ್ದರು. ಯಶೋಧರ ಬಂಗೇರ ಮರೋಡಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಉಮೇಶ್ ಗೌಡ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here