ಹವ್ಯಕ ಭವನದಲ್ಲಿ ಮಾತೃ ಪೂಜನ, ಮಾತೃ ವಂದನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ

0

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (5) ಕರ್ನಾಟಕ ಕೇಂದ್ರ ಕಚೇರಿ, ತುಮಕೂರು, ಮಂಗಳೂರು ಮಹಾನಗರ ಹಾಗೂ ಉಪ್ಪಿನಂಗಡಿ ವಿಭಾಗದ ನಮ್ಮ ಮನೆ ಶಾಖೆಯ ಸಹಯೋಗದಲ್ಲಿ ಪಾಂಡುರಂಗ ಶಾಖೆಯ ಯೋಗ ಕೇಂದ್ರದಿಂದ ‘ಮಾತೃ ಪೂಜನ, ಮಾತೃ ವಂದನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ ಜೂ. 1ರಂದು ಹವ್ಯಕ ಭವನದಲ್ಲಿ ನೆರವೇರಿತು.

ಪ್ರಾಂತದ ಪ್ರಮುಖರಾದ ರವೀಶ್ ತಾಯಿಯ ತ್ಯಾಗ, ಪ್ರೀತಿ, ವಾತ್ಸಲ್ಯದ ಅನುಭೂತಿ ನೀಡುವಂತಹ ಬೌದ್ಧಿಕ ಮಾತನ್ನಾಡಿದರು. ಸಭಾ ಕಾಠ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಮನೆ ಶಾಖೆಯ ಪೂರ್ಣಿಮ ವಹಿಸಿ ತಮ್ಮ ಯೋಗ ಅನುಭವವನ್ನು ಹಂಚಿಕೊಂಡರು. ಯೋಗಬಂಧು ಹಾಗೂ ನಾಗರಿಕ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷೆ ವಿದ್ಯಾ ನಾಯಕ್‌ರವರು ಯೋಗ ತರಬೇತಿಯಿಂದ ತನಗಾದ ಅನುಭವ ಹಂಚಿಕೊಳ್ಳುತ್ತಾ ತಾಯಿ ಹೃದಯ, ವಾತ್ಸಲ್ಯ, ತ್ಯಾಗ, ಮಮತೆಯೆಂಬ ಮಾನವ ಗುಣಗಳನ್ನು ಗಂಡೂ ಹೆಣ್ಣ ಮಕ್ಕಳಲ್ಲಿ ಪೋಷಿಸಿದ್ದಲ್ಲಿ ಈ ಸಮಾಜ ಕೌರವರಹಿತ ಸಮಾಜವಾಗುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಹವ್ಯಕ ಭವನದ ಸದಸ್ಯೆ ವೆಂಕಟೇಶ್ವರಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಯೋಗಬಂಧುಗಳ ಕುಟುಂಬಸ್ಥರನ್ನು, ಅತಿಥಿಗಳನ್ನು ಹೂ, ಅರಸಿನ ಕುಂಕುಮ, ಬಳೆ, ಬೆಲ್ಲ, ನೀರು ನೀಡಿ ಬರಮಾಡಿಕೊಳ್ಳಲಾಯಿತು. ಆರಂಭದಲ್ಲಿ ಭಜನೆ, ಆಟದ ಮೂಲಕ ನಗುವಿನ ಯೋಗವನ್ನು ರವೀಶ್ ರವರು ಮಾಡಿಸಿದರು. ಹೆತ್ತವರಿಗೆ ಮಕ್ಕಳು ಆರತಿ ಬೆಳಗಿ ನಮಸ್ಕರಿಸಿದರು. ಎಲ್ಲಾ ಹಿರಿಯರ ಕಾಲಿಗೆ ಎರಗಿ ಆಶೀರ್ವಾದ ಪಡೆಯಲಾಯಿತು. ಬಳಿಕ ಯೋಗಬಂಧುಗಳು ತಯಾರಿಸಿದ ಪ್ರಸಾದವನ್ನು ಕೈತುತ್ತು ನೀಡಿ ಉಣಬಡಿಸಲಾಯಿತು. ತಾಯಿ ಮಮತೆಯ ಸುಶ್ರಾವ್ಯ ಹಾಡುಗಳನ್ನು ಹಾಡಲಾಯಿತು. ಪ್ರಸಾದ ರೂಪದಲ್ಲಿ ನಮ್ಮ ಸಾಂಪ್ರದಾಯಿಕ ತಿನಿಸುಗಳಾದ ಬಸಳೆ ಪುಂಡಿ, ಪತ್ರೋಡೆ, ಹಲಸಿನ ಗಟ್ಟಿ, ಮುಳ್ಳುಸೌತೆ ಗಟ್ಟಿ, ಚಗತೆ ದೋಸೆ, ಪಲ್ಯ, ಸೊಪ್ಪಿನ ಚಟ್ಟಿ, ಕಿಚಡಿ, ಲಡ್ಡು, ಚಿತ್ರಾನ್ನ ಬಡಿಸಲಾಯಿತು.

ಶಾಂತ, ದಿನೇಶ್, ಇಡ್ಯಾ ಚಿದಾನಂದ, ಜಯಶ್ರೀ, ಯೋಗೀಶ್ ತಮ್ಮ ಅನುಭವ ಹಂಚಿಕೊಂಡರು. ಬೇಬೀಂದ್ರ ಸ್ವಾಗತಿಸಿ, ಲಲಿತ ಯೋಗ ತರಬೇತಿಯ ವರದಿ ವಾಚಿಸಿದರು. ಉಷಾ ವಂದಿಸಿದರು. ಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here