ಕೊಯ್ಯೂರು ದೇವಸ್ಥಾನ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

0

ಕೊಯ್ಯೂರು: ಜೂ.06ರಂದು ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಪೋಷಕರಿಂದ ಶಾಲಾ ಆವರಣದ ಸ್ವಚ್ಚತೆ ಮತ್ತು ಶಾಲಾ ಕೈ ತೋಟದ ಕೆಲಸ ಹಾಗೂ ಶಾಲಾ ಅಡಿಕೆ ತೋಟದಲ್ಲಿ ಕಳೆಗಳನ್ನು ಕಿತ್ತು, ಅಡಿಕೆ ಗಿಡಗಳ ಬುಡಕ್ಕೆ ಹಟ್ಟಿ ಗೊಬ್ಬರ ಹಾಕುವ ಕೆಲಸವನ್ನು ಶ್ರಮದಾನ ಮೂಲಕ ಮಾಡಲಾಯಿತು.

ಶ್ರಮದಾನದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರಂದರ ಗೌಡ, ನಿಕಟ ಪೂರ್ವ ಅಧ್ಯಕ್ಷರಾದ ಸುಧಾಕರ ದೇವಾಡಿಗ ಹಾಗೂ ಸುಮಾರು 25ಕ್ಕೂ ಅಧಿಕ ಮಂದಿ ಪೋಷಕರು ಭಾಗವಹಿಸಿ ಶ್ರಮದಾನ ಮಾಡಿದರು.

LEAVE A REPLY

Please enter your comment!
Please enter your name here