ಉಜಿರೆ: ಚಾರ್ಮಾಡಿ ರಸ್ತೆಯ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ವಾಣಿಜ್ಯ ನಿವೇಶನ ಉಜಿರೆಯ ಶ್ರೀ ಕಾಲಭೈರವ ಆರ್ಕೆಡ್ನಲ್ಲಿ ಜೂ. 6ರಂದು ಸಮೃದ್ಧಿ ಟ್ರೇಡರ್ಸ್ ದಿನಸಿ ಮಳಿಗೆ ಶುಭಾರಂಭಗೊಂಡಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್ಕೃಷ್ಣ ಪಡ್ಡೆಟ್ನಾಯ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ಹಾಗೂ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ. ಗಂಗಾಧರ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ಕೆ. ಬಾಲಕೃಷ್ಣ ಗೌಡ, ಉಜಿರೆ ಗ ಉಜಿರೆ ದಿಶಾ ಪುಡ್ ಕಾರ್ನರ್ ಅರುಣ್ ಕುಮಾರ್, ಉಜಿರೆ ಎಸ್.ಪಿ. ಆಯಿಲ್ ಮಿಲ್ ಶಿವ ಕಾಂತ ಗೌಡ,ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ, ಉಜಿರೆ ಚೆಫ್ ವಿಲೇಜ್ ರೆಸ್ಟೋರೆಂಟ್ ಸುಬ್ಬಯ್ಯ ಗೌಡ ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕರಾದ ಹೇಮಂತ್ ಗೌಡ ಮತ್ತು ಮನ್ವಿತಾ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ನಿತಿನ್ ಸುರುಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಗೌಡ ಕೆ. ವಂದಿಸಿದರು.