ಧರ್ಮಸ್ಥಳ: ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ( ಎಲ್. ಕೆ. ಜಿ ) ಆಂಗ್ಲ ಮಾಧ್ಯಮ ಜೂ. 5ರಂದು ಶುಭಾರಂಭಗೊಂಡಿತು. ಜಾನಕಿ ರಾಮಯ್ಯ, ಗುಲ್ಲೋಡಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ, ಪವಿತ್ರ ಸುಕುಮಾರ್ ಶೆಟ್ಟಿ ಬೃಂದಾವನ ಮನೆ, ಧರ್ಮಸ್ಥಳ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರಭಾಕರ್ ಗೌಡ ಬೊಳ್ಮ ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ಕೆ. ನಂದ ವಹಿಸಿದ್ದರು. ಉಪಾಧ್ಯಕ್ಷೆ ಚಂದ್ರಾವತಿ, ಗೌರವ ಸಲಹೆಗಾರ ರಾಜೇಂದ್ರ ಅಜ್ರಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ಎಲ್. ಕೆ. ಜಿ. ಶಿಕ್ಷಣವನ್ನು ಪಡೆಯಲು ಸೇರಿದ ಮಕ್ಕಳಿಗೆ ಪುಸ್ತಕವನ್ನು ವಿತರಿಸಿ ಶುಭ ಹಾರೈಸಿದರು.
ಧರ್ಮಸ್ಥಳ ಫ್ಯಾಕ್ಸ್ ನಿರ್ದೇಶಕ ನೀಲಕಂಠ ಶೆಟ್ಟಿ, ಶೀನ, ಸ್ಥಳೀಯ ರಾದ ಸಿ.ಜೆ. ಪ್ರಭಾಕರ್, ಎಸ್. ಡಿ. ಎಂ. ಸಿ ಗೌರವ ಸಲಹೆಗಾರ ಅರುಣ್ ಕುಮಾರ, ಶಾಲಾ ಶಿಕ್ಷಕ ವೃಂದ, ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ಸ್ವಾಗತಿಸಿ, ಸಹ ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿದರು. ಸಹ ಶಿಕ್ಷಕಿ ರಾಜಿ ಸಿ. ಕೆ. ವಂದಿಸಿದರು.