ಶಿಶಿಲ: ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲದ ವತಿಯಿಂದ ಜೂ.1ರಂದು ಬೆಳಿಗ್ಗೆಯಿಂದ ಮದ್ಯಾಹ್ನ ತನಕ ಶಿಶಿಲ ಕಾಲೋನಿ ಸಮೀಪ ಸೇತುವೆ ಬಳಿಯಿಂದ ಆಶ್ರಮ ಶಾಲೆ ತನಕ ರಸ್ತೆಗೆ ತಾಗಿಕೊಂಡಿರುವ ಗಿಡಗಳನ್ನು ತೆರವು ಗೊಳಿಸಲಾಯಿತು. ಈ ಶ್ರಮದಾನದಲ್ಲಿ ರಮೇಶ್ ಬೈರಾಕಟ್ಟಾ ಬಿ., ಹರೀಶ, ವಿವೇಕಾನಂದ, ಮುತ್ತಪ್ಪ, ವಿಶ್ವನಾಥ, ಬಾಲಕೃಷ್ಣ ಎಳ್ಳುಮಜಲು, ಬಾಲಕೃಷ್ಣ ಕೆ., ಕಿರಣ್, ಸುರೇಂದ್ರ, ಸುಂದರ ಕೆ. ಮುಂತಾದವರು ಭಾಗವಹಿಸಿದ್ದರು.