
ಬೆಳ್ತಂಗಡಿ: ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವ ಮೊಗೇರ ಕನ್ಯಾಡಿರವರು ಆರೋಗ್ಯ ಸಮಸ್ಯೆಯಿಂದ ಬಲ ಕಾಲು ಕಳೆದುಕೊಂಡಿದ್ದು,ಇವರ ಮನೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಎ. 26ರಂದು ಬೆಳಿಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಜೊತೆಗೆ ವೈಯುಕ್ತಿಕ ಧನ ಸಹಾಯ ಮಾಡಿದರು.

ನಡೆದಾಡಲು ಬೇಕಾದ ಕೃತಕ ಕಾಲಿಗೆ ಸಹಕಾರ ನೀಡುವಂತೆ ವಿಧಾನ ಪರಿಷತ್ ಶಾಸಕರಲ್ಲಿ ವಿನಂತಿ ಮಾಡಿದರು.