ಮುಂಡೂರು ಮಂಗಳಗಿರಿ ನಾಗಕಲ್ಲುರ್ಟಿ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಾರಂಭ: ಸನ್ಮಾನ, ವಸ್ತ್ರ ವಿತರಣೆ

0

ಮುಂಡೂರು: ಕಾರಣಿಕದ ಕ್ಷೇತ್ರ ಮಂಗಳಗಿರಿ ಶ್ರಿ ನಾಗಕಲ್ಲುರ್ಟಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ. 12ರಂದು ಪ್ರಾರಂಭವಾಯಿತು.

ಕ್ಷೇತ್ರದಲ್ಲಿ ವಿಷೇಷ ಪೂಜೆ ಮತ್ತು ರಂಗ ಪೂಜೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಉದ್ಭವ ಗಣಪತಿಗೆ, ಶ್ರೀ ನಾಗಾಂಬಿಕೆ ಅಮ್ಮ ನವರಿಗೆ ಜೋಡು ರಂಗಪೂಜೆ ನಡೆಯಿತು.

ಬಳಿಕ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ಡೆನ್ನಾನ ತುಳು ನಾಟಕ ನಡೆಯಿತು. ಕ್ಷೇತ್ರದ ವತಿಯಿಂದ ಕ್ಷೇತ್ರದ ಅರ್ಚಕ ವೆಂಕಟೇಶ ಶಾಂತಿ, ನಾಟಕ ಕಲಾವಿದೆ ಅನುಷಾ ಅಚಾರ್ಯ, ಅಭಯ ಹಸ್ತ ತಂಡದ ಉಮನಾಥ್ ಕೋಟ್ಯಾನ್ ಮತ್ತು ತಂಡದವರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕ ಜಯರಾಜ್ ಬಂಗೇರ, ಪುಷ್ಪಾಲಂಕಾರ ಸೇವಾಕರ್ತರಾದ ಸುದಾಮಣಿ ಗೋಪಾಲ ಶೆಟ್ಟಿ, ಇವರನ್ನು ಗೌರವಿಸಲಾಯಿತು.

ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ 200 ಮಂದಿಗೆ ವಸ್ತ್ರ ವಿತರಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೆಸರ ರಾಜೀವ, ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಾಧ್ಯಕ್ಷ ಪ್ರಸಾಂತ್ ಅಚಾರ್ಯ, ಜೊತೆ ಕಾರ್ಯದರ್ಶಿ ಪ್ರಸಾಂತ್ ಶೆಟ್ಟಿ ಮತ್ತು ನೂರಾರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here