ಬಾರ್ಯ: ಶ್ರೀ ಮಹಾವಿಷ್ಣು ದೇವಸ್ಥಾನದ ಭದ್ರಕಾಳಿ ಅಮ್ಮನ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

0

ಬಾರ್ಯ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀ ಭದ್ರಕಾಳಿ ಅಮ್ಮನ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.3ರಿಂದ 11.ರವರೆಗೆ ಜರಗಿತು. ಭಜನೆ, ಅಕ್ಷರಾಭ್ಯಾಸ ಹಾಗೂ ಅನ್ನಸಂತರ್ಪಣೆ ನಡೆಯಿತು.

ಅ.12ರಂದು ವಾಹನ ಪೂಜೆ ಮತ್ತು ಶ್ರೀ ಮಹಾವಿಷ್ಣು ದೇವರಿಗೆ ಹೊಸಕ್ಕಿ ನೈವೇದ್ಯದೊಂದಿಗೆ ಮಹಾಪೂಜೆ ನಡೆದು, ಹೊಸಕ್ಕಿ ಊಟ ನಡೆಯಿತು. ಬಾರ್ಯ ದೈವಗಳ ಗುರಿಕಾರರಾದ ಭಾಸ್ಕರ್ ಬಾರ್ಯ ಮತ್ತು ಗುರುಪ್ರಸಾದ್ ನೂರಿತ್ತಾಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ದೇಗುಲದ ಸೇವಾ ಟ್ರಸ್ಟ್ ನ ರಾಜೇಶ್ ಬಾರ್ಯ, ಪ್ರಶಾಂತ್ ಪೈ, ಶೇಷಪ್ಪ ಸಾಲಿಯಾನ್, ಶಿವರಾಮ್ ನಾಯ್ಕ, ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ಧರು.

LEAVE A REPLY

Please enter your comment!
Please enter your name here