ಲಾಯಿಲ, ಮೇಲಂತಬೆಟ್ಟು ಆರ್.ಪಿ.ಸಿ ವತಿಯಿಂದ ಸಮಾಜಮುಖಿ ಕಾರ್ಯಕ್ರಮ

0

ಬೆಳ್ತಂಗಡಿ: ಲಾಯಿಲ ಮತ್ತು ಮೇಲಂತಬೆಟ್ಟು ಗ್ರಾಮದಲ್ಲಿ ಆರ್ ಪಿ ಸಿ ವತಿಯಿಂದ ಸೆ.26ರಿಂದ 28ರವರೆಗೆ ವಿವಿಧ ಸಮಾಜ ಸೇವೆ ಮೂಲಕ ಚಾರಿಟಿ ಮಾಡಲಾಯಿತು.

ಎರಡು ಗ್ರಾಮದ ಸುಮಾರು 50 ತೀರಾ ಬಡ ಕುಟುಂಬಗಳಿಗೆ 12 ಬಗೆಯ ಆಹಾರ ಧಾನ್ಯಗಳ ಆಹಾರ ಕಿಟ್, ಕರ್ನೋಡಿ, ಕನ್ನಾಜೆ, ಮೇಲಂತಬೆಟ್ಟು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ, ಕರ್ನೋಡಿ ಸರಕಾರಿ ಶಾಲಾ ಬಿಸಿ ಊಟದ ಕಟ್ಟಡದ ಮೇಲ್ಚಾವಣಿಗೆ ರೂ.1ಲಕ್ಷ ವೆಚ್ಚದಲ್ಲಿ ನಿರ್ಮಾಣ ಮೊದಲಾದ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕರ್ನೋಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆರ್ ಪಿ ಸಿ ಸದಸ್ಯರನ್ನು ಗೌರವಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ. ಕೆ. ಧನಂಜಯ ರಾವ್,ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here