ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿ ಪ್ರಯುಕ್ತ ಶರಸೇತು ಬಂಧನ ತಾಳಮದ್ದಳೆ

0

ಉಜಿರೆ: ಗೇರುಕಟ್ಟೆ, ಬೆಳ್ತಂಗಡಿ ಶ್ರೀ ಮದವೂರ ವಿಘ್ನೇಶ ಕಲಾಸಂಘದ ಸದಸ್ಯರಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿಯ ಪ್ರಯುಕ್ತ “ಶರಸೇತು ಬಂಧನ” ಎಂಬ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಕುಮಾರಿ ನಂದನ ಮಾಲೆಂಕಿ, ಕಾರ್ತಿಕ್ ಬಳ್ಳಮಂಜ, ರತನ್ ಗುಡಿಗಾರ್, ಆದಿತ್ಯ ಹೊಳ್ಳ ಭಾಗವಹಿಸಿದ್ದರು.

ಮುಮ್ಮೇಳದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಬಾಸಮೆ ನಾರಾಯಣ ಭಟ್, ಶ್ರೀರಾಮಕೃಷ್ಣ ಭಟ್ ಬಳಂಜ, ಕೆ.ಆರ್.ಸುವರ್ಣ ಕುಮಾರಿ ಪಾಲ್ಗೊಂಡರು.

ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವಟ್ನಾಯ, ಕಲಾವಿದರಾದ ಮೋಹನ ಬೈಪಾಡಿತ್ತಾಯ, ಕೊಯ್ಯೂರು ಅಶೋಕ ಭಾಂಗಿನ್ನಾಯ, ಡಾ.ಪ್ರಸನ್ನಕುಮಾರ್ ಐತಾಳ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಕಲಾವಿದರಿಗೆ ಶಾಲು ಹೊಂದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here