ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- 394 ಕೋಟಿ ವಾರ್ಷಿಕ ವ್ಯವಹಾರ, 1.54 ಕೋಟಿ ರೂ ನಿವ್ವಳ ಲಾಭ, ಶೇ.14 ಡಿವಿಡೆಂಡ್ ಘೋಷಣೆ

0

ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಸ್ವರಾಜ್ ಟವರ್ಸ್‌ ಶ್ರೀಗುರು ಸಭಾಭವನದಲ್ಲಿ ಸೆ.24ರಂದು ನಡೆಯಿತು.

ವರದಿ ಸಾಲಿನಲ್ಲಿ ಸಂಘದಲ್ಲಿ 3657 ಸದಸ್ಯರನ್ನು ಹೊಂದಿದ್ದು. 1,44,11,945 ಕೋಟಿ ಠೇವಣಿ ಸಂಗ್ರಹಿಸಿ ಒಟ್ಟು 29.60 ಕೋಟಿ ಠೇವಣಿ ಹೊಂದಿದೆ. 30 ಕೋಟಿ ಸಾಲ ಪಡೆದು, 57.26 ಕೋಟಿ ಸದಸ್ಯರು ಪಡೆದುಕೊಂಡಿದ್ದಾರೆ. 14,87,13,895 ಕೋಟಿ ಹೊರ ಬಾಕಿ ಸಾಲ ಹೊಂದಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡಿ 11,90,227 ವ್ಯಾಪಾರ ಲಾಭ ಗಳಿಸಿದೆ. ಇದರಿಂದ ಒಟ್ಟು 394 ಕೋಟಿ ವ್ಯವಹಾರ ನಡೆಸಿ ರೂ. 1.54ರಷ್ಟು ಲಾಭಗಳಿಸಿದೆ. ಸದಸ್ಯರಿಗೆ ಶೇ 14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಸಭೆಯಲ್ಲಿ ತಿಳಿಸಿದರು.

ಸಾಮಾಜಿಕ ಚಟುವಟಿಕೆಗಳಿಗೆ 1,49,500 ಲಕ್ಷ ಧನ ಸಹಾಯ ವಿತರಿಸಿದೆ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ಧನ, ನಿರ್ದೇಶಕರಾದ ಗುರುಪ್ರಸಾದ್, ವಿಶ್ವನಾಥ ಹೊಳ್ಳ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಹೇಮಂತ್, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಮೀರಾ ವರದಿ ಮಂಡಿಸಿದರು. ಸಿಬಂದಿಗಳಾದ ಸತೀಶ್ ಕೆ., ಪ್ರಶಾಂತ್ ಎಸ್, ಭರತ್ ರಾಜ್, ಜಗದೀಶ್ ಶೆಟ್ಟಿ, ಮಮತಾ, ಸಂತೋಷ್, ಹರೀಶ್ ನಾಯ್ಕ, ಯತೀಶ್, ದಿನೇಶ್, ಪ್ರವೀಣಾ, ಶ್ರೀದೇವಿ, ಸುಮಲತಾ, ಕಿರಣ್, ಡೀಕಯ್ಯ, ಜಯಾನಂದ ಸಹಕರಿಸಿದರು.

LEAVE A REPLY

Please enter your comment!
Please enter your name here