ಬೆಳ್ತಂಗಡಿ: ಉಚಿತ ರಕ್ತ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ

0

ಬೆಳ್ತಂಗಡಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಘಟಕ, ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಹಾಗೂ ದ.ಕ.ಹಾಸ್ಪಿಟಲ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೋರ್ಟ್ ರಸ್ತೆಯಲ್ಲಿರುವ “ಅನನ್ಯ” ಕಛೇರಿಯಲ್ಲಿ ಸೆ.22ರಂದು “ಉಚಿತ ರಕ್ತ ತಪಾಸಣೆ ಹಾಗೂ ಅರೋಗ್ಯ ತಪಾಸಣಾ ಶಿಬಿರ”ವನ್ನು ಸೀನಿಯರ್ ಪಿಪಿಎಫ್ ವಾಲ್ಟರ್ ಸಿಕ್ವೇರಾರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹರಿದಾಸ್ ಎಸ್. ಎಂ ಇವರು ಪ್ರಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು.ಕಾರ್ಯದರ್ಶಿ ಸೀನಿಯರ್ ಪಿಪಿಎಫ್ ಜಾನ್ ಅರ್ವಿನ್ ಡಿಸೋಜರವರು ಶುಭಕೋರಿದರು.

ವೇದಿಕೆಯಲ್ಲಿ ವಕೀಲರಾದ ಶಿವಕುಮಾರ್, ವೆಂಕಟೇಶ್ ಮಯ್ಯ, ಡಾ.ದೀಪ್ತಿ ಹಾಗೂ ಡಾ.ಅನನ್ಯರವರು ಉಪಸ್ಥಿತರಿದ್ದರು.ಛೇoಬರಿನ ಪೂರ್ವಧ್ಯರಾದ ಸೀನಿಯರ್ ಪಿಪಿಎಫ್ ಪ್ರಥ್ವಿ ರಂಜನ್ ರಾವ್, ಸೀನಿಯರ್ ಪಿಪಿಎಫ್ ಲ್ಯಾನ್ಸಿ ಪಿರೇರಾ, ಸದಸ್ಯರಾದ ಸೀನಿಯರ್ ಪಿಪಿಎಫ್ ಹರೀಶ್ ಶೆಟ್ಟಿ, ಸೀನಿಯರ್ ಪಿಪಿಎಫ್ ವಿಲ್ಸನ್ ಗೊನ್ಸಾಲ್ವಿಸ್, ಸೀನಿಯರ್ ದಯಾನಂದ ಹಾಗೂ ಸೀನಿಯರ್ ಬಾನುಪ್ರಸನ್ನರವರು ಭಾಗವಹಿಸಿದರು.

ಶಿವಕುಮಾರ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

ಸುಮಾರು 200 ಜನರು ಈ ಶಿಬಿರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here