ಗುರುವಾಯನಕೆರೆಯ ಗೆಳೆಯರ ಬಳಗದಿಂದ ಸಾರ್ವಜನಿಕ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕುವೆಟ್ಟು: ಗುರುವಾಯನಕೆರೆಯ ಗೆಳೆಯರ ಬಳಗದ ವತಿಯಿಂದ 34ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ‌ ಜರುಗಲಿದ್ದು, ಇದರ ಆಮಂತ್ರಣ ಪತ್ತಿಕೆಯು ಬಿಡುಗಡೆಗೊಂಡಿದೆ. ಗುರುವಾಯನಕೆರೆಯ ಶಾರದಾ ಮಂದಿರದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣಾನಂದ ಕುಲಾಲ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಮೆಸ್ಕಾಂ ಜೆ.ಇ.ಯೋಗೀಶ್ ಆಚಾರ್ಯ ಯರ್ಡುರು, ಶ್ರೀಗುರು ಡ್ರೈವಿಂಗ್ ಮಾಲಕ ರಮಾನಂದ ಸಾಲ್ಯಾನ್ ಹಾಗೂ ಗೆಳೆಯರ ಬಳಗದ ಸರ್ವಸದಸ್ಯರು, ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಬಳಗದ ಆನಂದ ಕೋಟ್ಯಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here