ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ: ಅದ್ವಿಕ ಕೆ.ಪಿ.ಗೆ ಚಿನ್ನದ ಪದಕ

0

ಬೆಳ್ತಂಗಡಿ: ಮೈಸೂರು ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟದ 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸೇಂಟ್ ಆಗ್ನೆಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅದ್ವಿಕ ಕೆ.ಪಿ. ಅವರು ಅತ್ಯುತ್ತಮ ಅಥ್ಲೆಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದ್ವಿಕ ಅವರು Trayathlon ಬಿ ವಿಭಾಗದಲ್ಲಿ 2473 ಅಂಕ ಗಳಿಸಿ ಚಿನ್ನದ ಪದಕ ಪಡೆದು ಅಕ್ಟೋಬರ್ 19ರಿಂದ ಹೈದರಾಬಾದ್ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ದಿನೇಶ್ ಕುಂದರ್ ತರಬೇತಿ ನೀಡುತ್ತಿದ್ದಾರೆ. ಡಾ.ಅರುಣ್ ಕುಮಾರ್ ಮತ್ತು ಗೀತಾ ಪಾಲೇರ್ ಅವರ ಪುತ್ರಿಯಾಗಿರುವ ಅದ್ವಿಕ ಅವರು ವೇಣೂರು ಕುಂಡದ ಬೆಟ್ಟು ನಾರಾಯಣ ಮಾಸ್ಟರ್ ಮತ್ತು ವಾರಿಜಾ ಟೀಚರ್ ಅವರ ಮೊಮ್ಮಗಳು.

LEAVE A REPLY

Please enter your comment!
Please enter your name here