ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರಚನೆ

0

ಬಂದಾರು: ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಬರುವ ಜನವರಿ 7 ರಿಂದ 12ರ ವರೆಗೆ ನಡೆಯಲಿದ್ದು, ಇದರ ಸಮಾಲೋಚನಾ ಸಭೆ ಸೆ. 15ರಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಮಹಾಬಲ ಗೌಡ ನಾಗಂದೋಡಿ, ಪ್ರಧಾನ ಸಂಚಾಲಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಬಜೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿಯಾಗಿ ಕೇಶವ ಗೌಡ ಕೋಂಗುಜೆ, ಉಪಾಧ್ಯಕ್ಷರುರುಗಳಾಗಿ ವಿಶ್ವನಾಥ ಪೂಜಾರಿ ಕುರುಡಂಗೆ, ತಿಮ್ಮಪ್ಪ ಗೌಡ ಸೋಣಕುಮೇರು, ಕಾರ್ಯದರ್ಶಿಯಾಗಿ ಸತೀಶ್ ಗೌಡ ಬಾಲಂಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಕು.ಪ್ರತೀಕ್ಷಾ ಪಯ್ಯೋಡಿ, ಕು.ಶರಣ್ಯ ಬೈದ್ರೋಟ್ಟು, ಸವಿತಾ ತಾರಕರೆ, ಸದಸ್ಯರುಗಳಾಗಿ ಗೀತಾ ಕಾಡಂಡ, ರಾಜೀವಿ ತಾರಾಕರೆ, ಜಯಣ್ಣ ಗೌಡ ಮಿನಂದೇಲು ಇವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಉಪ ಸಮಿತಿಗೆ ಸಂಚಾಲಕ, ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here