ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡರಿಗೆ ಸನ್ಮಾನ

0

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಗೆ ನೂತನವಾಗಿ ಆಯ್ಕೆಯಾದ ಜಯಾನಂದ ಗೌಡ ಪ್ರಜ್ವಲ್ ರಿಗೆ ಬೆಳ್ತಂಗಡಿಯ ಪ್ರಪುಲ್ಲ ನಗರ ನಿವಾಸಿಗಳು ಸೆ.4ರಂದು ಜಯಾನಂದರ ಮನೆಯಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಚಂದಯ್ಯ ಗೌಡ, ಕೊಯ್ಯೂರು ಪ್ರೌಡ ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ, ಉಪನ್ಯಾಸಕ ಗಣೇಶ್ ಭಟ್, ಟೆಲಿಕಾಂ ನಿವೃತ್ತ ಉದ್ಯೋಗಿ ದಿನಕರ ಗೌಡ, ಮಂಜುನಾಥ ರೈ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್, ಪಶು ವೈದ್ಯಕೀಯ ಪರಿವೀಕ್ಷಕ ಶ್ರೀಧರ್, ಪುಂಜಾಶ್ರೀ ಪ್ರಿಂಟರ್ಸ್ ಮಾಲಕ ಅತ್ಯಕ್ತಿ, ಶಿಕ್ಷಕಿಯರಾದ ಕುಮುದಾ, ಮಾಲಿನಿ, ಅನ್ನಮ್ಮ, ಜಯಂತಿ, ವಿಮಲ, ಸ್ವಾತಿ, ಪುಷ್ಪವತಿ, ಸೌಜನ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here