ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

0

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮತ್ತು ಪ್ರಾದೇಶಿಕ ರಕ್ತ ಪೂರ್ಣ ಕೇಂದ್ರ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಮುಗಳಿ ಶಾಲೆಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಜ ಕೇಸರಿ ಸಂಘಟನೆಯ ಸಂದೀಪ್ ಬೆಳ್ತಂಗಡಿ ವಿವರಿಸಿಕೊಟ್ಟರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರು ಮುಗುಳಿ ನಾರಾಯಣರಾವ್ ಇವರು ಉದ್ಘಾಟಿಸಿ ರಾಜ ಕೇಸರಿ ಸಂಘಟನೆ ಬಹಳ ಉತ್ತಮವಾದ ಕಾರ್ಯಕ್ರಮಗಳ ನಿರೂಪಿಸಿಕೊಂಡು ತಾಲೂಕಿನಲ್ಲದೆ ರಾಜ್ಯದಲ್ಲಿಯೂ ಕೂಡ ಮನೆ ಮಾತಾಗಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮನೋಹರ್ ಬಳಂಜ ವರದಿಗಾರರು ವಿಜಯವಾಣಿ, ಜಯಾನಂದ ಘಟಕ ಅಧಿಕಾರಿ ಗೃಹ ರಕ್ಷಕ ದಳ ಬೆಳ್ತಂಗಡಿ ವಲಯ, ಸತೀಶ್ ರೈ ಪುಂಡಿಕು ಉದ್ಯಮಿಗಳು ಬೆಳ್ತಂಗಡಿ, ಬಿಕೆ ವಸಂತ್ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರು ಸಂಸ ಅಂಬೇಡ್ಕರ್ ವಾದ, ಕರುಣಾಕರ್ ಬಂಗೇರ ಅಧ್ಯಕ್ಷರು ಜೆಪಿ ಅಟಕರ್ ಬೊಟ್ಟುಗುಡ್ಡೆ, ಶಿವಶಂಕರ್ ಪಿಲಿ ಚಾಮುಂಡಿ ಇಂಜಿನಿಯರ್ ವರ್ಕರ್ಸ್ ಗುರುವಾಯನಕೆರೆ, ಚಾಬಕ್ಕ ಗೌರವ ಸಲಹೆಗಾರರು ಖಾಸಗಿ ಬಸ್ ನೌಕರರ ಸಂಘ, ಸೀತಾರಾಮ್ ಮಾಲಕರು ಎಸ್ ಆರ್ ಬಿ ವೆಲ್ಡಿಂಗ್, ಸುರೇಂದ್ರ ಕೋಟ್ಯಾನ್ ಅಧ್ಯಕ್ಷರು ಟೈಲರ್ ಅಸೋಸಿಯನ್ ಬೆಳ್ತಂಗಡಿ ವಲಯ, ಲೂಸಿ ಲೀನಾ ಮೋರಸ್ ಮುಖ್ಯೋಪಾಧ್ಯಾಯರು ಹಿರಿಯ ಪ್ರಾಥಮಿಕ ಶಾಲೆ ಮುಗಳಿ, ಮೋಹನಂದ ಕುಲಾಲ್ ಅಧ್ಯಕ್ಷರು ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಗುರುವಾಯನಕೆರೆ, ವಿಶೇಷ ಅವಹಾನಿತರಾಗಿ ಆಗಮಿಸಿದ ಕಲಾ ಮಾಣಿಕ್ಯ ರಾಜೇಶ್ ಕಣ್ಣೂರು, ಖ್ಯಾತ ಚಲನಚಿತ್ರ ನಟಿ ಶೈಲಶ್ರೀ ಮುಲ್ಕಿ ಕಾರ್ಯಕ್ರಮದ ವೇದಿಕೆಯಲ್ಲಿ ಅಲಂಕಾರವನ್ನು ಚಂದಗಾಣಿಸಿಕೊಟ್ಟರು.

ಅದೇ ರೀತಿ ನಮ್ಮ ಜೊತೆ ಕೈಜೋಡಿಸಿದ ಬಹುದೊಡ್ಡ ರಕ್ತದಾನಿಗಳಾದ ಗೃಹರಕ್ಷಕ ದಳ ಬೆಳ್ತಂಗಡಿ ಘಟಕ, ಟೈಲರ್ ಅಸೋಸಿಯನ್ ಬೆಳ್ತಂಗಡಿ ವಲಯ, ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಗುರುವಾಯನಕೆರೆ, ಜೆ.ಪಿ ಅಟಾಕಾರ್ ಬೂಟುಗುಡ್ಡೆ, ಖಾಸಗಿ ಬಸ್ ನೌಕರರ ಸಂಘ, ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಊಟದ ಬಟ್ಟಲ್ ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.ಪಿಯುಸಿ ಮತ್ತು ಎಸ್ ಎಲ್ ಸಿ ಯ ಅಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ರಾಜ ಕೇಸರಿ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಊರ ಗಣ್ಯರಾದ ಸಂಗಮ್ ಸ್ಟೋರ ಇದರ ಮಾಲಕರಾದ ಸಿರಿಯಲ್ ಡಿಸೋಜ ಮತ್ತು ಉದ್ಯಮಿಗಳಾದ ಸತೀಶ್ ರೈ ಪುಂಡಿಕು, ಇವರನ್ನು ರಾಜ ಕೇಸರಿ ಸೇವಾ ರತ್ನ ಬಿರುದು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಊರ ಅಭಿಮಾನಿಗಳು ಬಂದು ಸಹಕರಿಸಿ ರಕ್ತದಾನ ನೀಡಿ ಸಂಘಟನೆಗೆ ಬೆಂಬಲವಾಗಿ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here