ವೇಣೂರು: ಯುವ ವಾಹಿನಿ ಘಟಕದಿಂದ ಗುರು ಜಯಂತಿ

0

ವೇಣೂರು: ಯುವವಾಹಿನಿ ವೇಣೂರು ಘಟಕದ ವತಿಯಿಂದ 170ನೇ ಗುರುನಾರಾಯಣ ಜಯಂತಿಯ ಪ್ರಯುಕ್ತ ಗುರುನಮನ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ ಇವರ ಅಧ್ಯಕ್ಷತೆಯಲ್ಲಿ ಕೊಕ್ರಾಡಿ ಬಿಲ್ಲವ ಸಂಘಲ್ಲಿ ನಡೆಯಿತು.ಆಂಡಿಂಜೆ ಗ್ರಾಮ ಪಂಚಾಯತನ ಮಾಜಿ ಅಧ್ಯಕ್ಷ ಸೂರ್ಯನಾರಾಯಣ ಡಿ.ಕೆ ದೀಪ ಪ್ರಜ್ವಲಿಸಿದರು. ಮಂಗಳೂರು ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅರುಣ್ ಕೋಟ್ಯಾನ್ ಗುರುಗಳ ಶುಭ ಸಂದೇಶ ನೀಡಿದರು.

ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಶಿಧರ್ ಕೆ, ಘಟಕದ ನಾಮ ನಿರ್ದೇಶನ ಸದಸ್ಯ ಸುರೇಶ್ ಅಂಡಿಂಜೆ ಹಾಗೂ ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಮೂಡುಕೋಡಿ ಮತ್ತು ಕೊಕ್ರಾಡಿ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಹಾಗೂ ಘಟಕದ ನಿರ್ದೇಶಕರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here