ಮರೋಡಿ: ಶ್ರೀ ದೇರಾಜೆಬೆಟ್ಟ ಕ್ಷೇತ್ರದ ರಸ್ತೆ ಸಂಪರ್ಕ ಕಡಿತ- ಶ್ರಮದಾನದ ಮೂಲಕ ಕಾಲು ಸೇತುವೆ ನಿರ್ಮಾಣ

0

ಮರೋಡಿ: ಧಾರಾಕಾರ ಮಳೆಯಿಂದ ಮರೋಡಿ ಶ್ರೀ ದೇರಾಜೆಬೆಟ್ಟ ಕ್ಷೇತ್ರದ ರಸ್ತೆ ಸಂಪರ್ಕ ಕಡಿತವಾಗಿತ್ತು ಈ ಹಿನ್ನಲೆ ಕ್ಷೇತ್ರಕ್ಕೆ ಹೋಗುವ ಭಕ್ತರಿಗೆ ಸಮಸ್ಯೆ ಎದುರಾಗಿತ್ತು.ಇದರೊಂದಿಗೆ ಸುತ್ತಮುತ್ತಲಿನ ಸುಮಾರು 10-12 ಮನೆಗಳ ಜನರು, ಶಾಲೆಗೆ ಹೋಗುವ ಮಕ್ಕಳಿಗೆ ಸಮಸ್ಯೆ ನಿರ್ಮಾಣವಾಗಿತ್ತು.ಇದನ್ನ ಮನಗಂಡ ಕ್ಷೇತ್ರದ ಭಕ್ತರು ಶ್ರಮದಾನದ ಮೂಲಕ ಸುಸಜ್ಜಿತ ಹಾಗೂ ಸುರಕ್ಷಿತವಾದ ಮರದ ಕಾಲು ಸೇತುವೆ ನಿರ್ಮಿಸಿ ಭಕ್ತರಿಗೆ ಹಾಗೂ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ.

ಆನಂದ ಶೆಟ್ಟಿ ಬೆರ್ಕೆ, ಕುರುಡಾಯಿ ಸುಂದರ ಪೂಜಾರಿ, ಮಡ್ಲ ವಾಸು ಪೂಜಾರಿ, ಸತೀಶ್ ಬೊಳ್ಳಾರಿ, ಶ್ರೀಧರ ಕೈಪಂದೊಡಿ, ವಿಶ್ವನಾಥ ಮಡ್ಲ, ಶಶಿ ಪೂಜಾರಿ ಕೆಳಗಿನ ಮನೆ, ಪವನ್ ಕೋಟ್ಯಾನ್ ಇವರೆಲ್ಲರ ಶ್ರಮದ ಮೂಲಕ ಮರದ ಸೇತುವೆ ನಿರ್ಮಾಣಗೊಂಡಿದೆ.

LEAVE A REPLY

Please enter your comment!
Please enter your name here