ಬೆಳ್ತಂಗಡಿ ಲಯನ್ಸ್ ಕ್ಲಬ್, ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಸಹಾಯಧನ ಹಸ್ತಾಂತರ

0

ನಾವರ: ದೇವರಗುಡ್ಡೆ ನಿವಾಸಿ ಹರೀಶ್ ಮೂಲ್ಯರವರು ಮರದ ಕಟ್ಟಿಂಗ್ ನ ಕೆಲಸ ಮಾಡುತ್ತಿರುವಾಗ ಮೆಷೀನ್ ಜಾರಿ ಅವರ ಕಾಲಿನ ಮೇಲೆ ಬಿದ್ದು ಸುಮಾರು 12 ಹೊಲಿಗೆಗಳನ್ನು ಹಾಕಿರುತ್ತಾರೆ. ಅವರ ಮಗನು ಸುಲ್ಕೇರಿ ಶ್ರೀರಾಮ ಶಾಲೆ ವಿದ್ಯಾರ್ಥಿಯಾಗಿದ್ದು ಅವನ ಕಾಲಿನ ಮೇಲೆ ಡೆಸ್ಕ್ ಬಿದ್ದು ಅವನು ಕೂಡ ಶಾಲೆಗೆ ಹೋಗಲಾರದೇ ಮನೆಯಲ್ಲಿಯೇ ಇದ್ದಾನೆ.ತುಂಬಾ ಬಡತನದಲ್ಲಿರುವ ಅವರ ಕುಟುಂಬಕ್ಕೆ ಲಯನ್ಸ್ ಕ್ಲಬ್ ಬೆಳ್ತಂಗಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ ಇವರ ವತಿಯಿಂದ 25 ಸಾವಿರ ರೂಪಾಯಿಯನ್ನು ಅವರ ಮನೆಗೆ ಹೋಗಿ ನೀಡಲಾಯಿತು.

ಈ ಸಂದರ್ಭ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ಲಯನ್ ದೇವದಾಸ್ ಶೆಟ್ಟಿ ಹಿಮರೋಡಿ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದಂತಹ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷ ಲಯನ್ ನಿತ್ಯಾನಂದ ನಾವರ, ಆಡಳಿತ ಸಮಿತಿಯ ಸದಸ್ಯ ಲಯನ್ಸ್ ರವಿ ಪೂಜಾರಿ ಹಾರಡ್ಡೆ, ಲಯನ್ಸ್ ಪ್ರಶಾಂತ್ ಪೂಜಾರಿ ಹಿಮರಡ್ಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here