ಸೋಷಿಯಲ್ ಡೆಮಾಕ್ರಾಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಗುರುವಾಯನಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಾಟಿಕ್ ಟ್ರೇಡ್ ಯೂನಿಯನ್ ಗುರುವಾಯನಕೆರೆ (ಎಸ್‌ಡಿ‌ಟಿಯು) ಇದರ ವತಿಯಿಂದ ಗುರುವಾಯನಕೆರೆ ಪೇಟೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ನಡೆಯಿತು.

ಧ್ವಜಾರೋಹಣವನ್ನು ಎಸ್‌ಡಿ‌ಟಿಯು ಗುರುವಾಯನಕೆರೆ ಇದರ ಅದ್ಯಕ್ಷ ಅಬ್ದುಲ್ ರಹಿಮಾನ್ ಇವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಹಸೈನಾರ್ BBS ಜಿ ಕೆ ಸಂದೇಶ ಬಾಷಣಗೈದರು. ಎಸ್‌ಡಿ‌ಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ದಿಕ್ಸೂಚಿ ಭಾಷಣಗೈದರು.

ಗ್ರಾಮ ಪಂಚಾಯತ್ ಸದಸ್ಯ ಮುಸ್ತಾಫ ಜಿ ಕೆ, ಸ್ವಾಲಿಹ್ ಮದ್ದಡ್ಕ ಅಧ್ಯಕ್ಷರು ಎಸ್‌ಡಿ‌ಟಿಯು ಬೆಳ್ತಂಗಡಿ ತಾಲೂಕು ಸಮಿತಿ, ಕಲಂದರ್ ಬಿ ಎಚ್ ಅಧ್ಯಕ್ಷರು ಎಸ್ ಡಿ ಪಿ ಐ ಕುವೆಟ್ಟು ಒಂದನೇ ವಾರ್ಡ್, ರಿಯಾಝ್ ಪಣಕಜೆ ಕಾರ್ಯದರ್ಶಿ ಎಸ್‌ಡಿ‌ಟಿಯು ಬೆಳ್ತಂಗಡಿ ತಾಲೂಕು, ಶಮೀಮುಲ್ಲಾ ಎಸ್ ಕೆ ಗ್ರಾಮ ಪಂ ಸದಸ್ಯರು ಕುವೆಟ್ಟು, ಅಬ್ದುಲ್ ರಝಾಕ್ ದದ್ದು ವೇಣೂರು ಬ್ಲಾಕ್ ಉಪಾಧ್ಯಕ್ಷರು ಎಸ್ ಡಿ ಪಿ ಐ, ಅಶ್ರಫ್ ಎಸ್.ಕೆ ಕೋಶಾಧಿಕಾರಿ ವೇಣೂರು ಬ್ಲಾಕ್ ಎಸ್ ಡಿ ಪಿ ಐ, ದಾವೂದ್ ಜಿ ಕೆ ಅಧ್ಯಕ್ಷರು ಎಸ್ ಡಿ ಪಿ ಐ ಗುರುವಾಯನಕೆರೆ ಬೂತ್, ನಿಸಾರ್ ಪ್ರ. ಕಾರ್ಯದರ್ಶಿ ಜುಮ್ಮಾ ಮಸ್ಜಿದ್ ಗುರುವಾಯನಕೆರೆ ಉಪಸ್ಥಿತರಿದ್ದರು.

ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಂತಹ ಆಪತ್ಭಾಂದವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಜಿ ಕೆ ಹಾಗೂ ಎಸ್‌ಡಿ‌ಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಇವರಿಗೆ ಎಸ್‌ಡಿ‌ಟಿಯು ಗುರುವಾಯನಕೆರೆ ವತಿಯಿಂದ ಸನ್ಮಾನಿಸಲಾಯಿತು.ಕಲಂದರ್ ಎಸ್ ಕೆ ಸ್ವಾಗತಿಸಿದರು, ಆಸೀಫ್ ಎಸ್ ಕೆ ಧನ್ಯವಾದಗೈದರು.

LEAVE A REPLY

Please enter your comment!
Please enter your name here