ಸೌತಡ್ಕ ಮಹಾಗಣಪತಿ ದೇವಸ್ಥಾನದ ನಾಗದೇವರಿಗೆ ನಾಗರ ಪಂಚಮಿಯ ಪ್ರಯುಕ್ತ ಪರ್ವ

0

ಕೊಕ್ಕಡ :ಸೌತಡ್ಕ ಮಹಾಗಣಪತಿ ದೇವಳದ ನಾಗದೇವರಿಗೆ ನಾಗರಪಂಚಮಿ ಪ್ರಯುಕ್ತ ಬೆಳಿಗ್ಗೆ ನಾಗತಂಬಿಲ ಕ್ಷಿರಾಭಿಷೇಕ, ಸಿಯಾಳಾಭಿಷೇಕವನ್ನು ದೇವಳದ ಅರ್ಚಕರಾದ ಗುರುರಾಜ್ ಭಟ್ ನೆರವೇರಿಸಿದರು. ಜನವರಿಯಲ್ಲಿ ಹೊಸದಾಗಿ ನಿರ್ಮಿಸಿದ ಮೇಲೆ ಮೊದಲ ಬಾರಿಗೆ ನಡೆಯುತ್ತಿರುವ ಈ ಪರ್ವದಲ್ಲಿ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ ಪೂವಾಜೆ, ಹೇಮಾ ಶಿವಾನಂದ ಸಂಕೇಶ,
ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಅಧ್ಯಕ್ಷ ಬಾಲಕೃಷ್ಣ ನೈಮೀಷ, ಸ್ಥಳೀಯರಾದ ರಾಮಣ್ಣ ಗೌಡ ಮುನ್ನಡ್ಕ, ಯಾದವ ಆಚಾರಿ, ದೇವಸ್ಥಾನದ ಸಿಬ್ಬಂದಿಗಳಾದ ಶಿವಪ್ರಸಾದ, ಲೋಕೇಶ್, ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here