ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಋಷಿ ಬಿ.ಶೆಟ್ಟಿ ಮಂಗಳೂರು ವಲಯ ಅಂಡರ್-23 ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆ

0

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದ್ವಿತೀಯ ವಾಣಿಜ್ಯ ಶಾಸ್ತ್ರ ವಿಭಾಗದ ಋಷಿ ಬಿ.ಶೆಟ್ಟಿ ಇವರು ಬೆಂಗಳೂರಿನಲ್ಲಿ ನಡೆಯಲಿರುವ ಅಂಡರ್-23 ಕ್ರಿಕೆಟ್ ಪಂದ್ಯಾವಳಿಯ ಮಂಗಳೂರು ವಲಯ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುತ್ತಾರೆ.

ಜುಲೈ 25ರಿಂದ ಆಗಸ್ಟ್ 5ರವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎಸ್.ಎ ಶ್ರೀನಿವಾಸನ್ ಸ್ಮರಣಾರ್ಥ ಪಂದ್ಯಾವಳಿಯಲ್ಲಿ ಮಂಗಳೂರು ವಲಯ ತಂಡವು ಭಾಗವಹಿಸಲಿದೆ.

ಋಷಿ ಬಿ. ಶೆಟ್ಟಿಯವರು ಮಂಗಳೂರಿನ ಕದ್ರಿಯಲ್ಲಿ ವಾಸಿಸುತ್ತಿರುವ ಕೆ.ಬಾಲಕೃಷ್ಣ ಶೆಟ್ಟಿ ಮತ್ತು ಮೃದುಲಾ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here