ಬೆಳ್ತಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಪ್ರಶಸ್ತಿ

0

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಚತುರ್ಥ ಚರಣ ಪರೀಕ್ಷೆಯಲ್ಲಿ ಎಂಟು ವಿದ್ಯಾರ್ಥಿಗಳು ಹಾಗೂ ಹೀರಕ್ ಗರಿ ಪರೀಕ್ಷೆಯಲ್ಲಿ ಎಂಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು, ರಾಜ್ಯಪಾಲರಿಂದ ಪ್ರಶಸ್ತಿ ಪತ್ರ ಪಡೆಯಲಿದ್ದಾರೆ.

ಕಬ್ ವಿದ್ಯಾರ್ಥಿಗಳಾದ ಗಹನ್ ದೀಪ್, ಕೃತಿನ್.ಡಿ , ಸಮೃದ್ಧ್ ಎಸ್ ಸುವರ್ಣ, ರಾಯ್ ಮೋರಸ್, ವಿಶೃತ್ ಕೆ ಎಸ್ , ಜೋಶ್ವಿನ್ ಪ್ರೇರಣ್ ಪೌಲ್ , ಸಾಕೇತ್ ಆರ್ ಭಟ್, ಎಡ್ವಿನ್ ಅಗಸ್ಟಿನ್ ಪೌಲ್ ಹಾಗೂ ಬುಲ್ ಬುಲ್ ವಿದ್ಯಾರ್ಥಿನಿಯರಾದ ಆದಿತ್ರಿ ವೈ , ಚಿನ್ಮಯಿ ನಾಯಕ್, ದೀಪ್ತಿ ಫೆರ್ನಾಂಡಿಸ್, ಆದ್ಯಾ ಕೋಟ್ಯಾನ್, ಮರಿಟ ಎಲ್ಸ ಮನೋಜ್, ಹಮ್ದ ಮರಿಯಂ ಅಲೀಫ, ತನ್ವಿತ ರಾವ್ , ಸಂಜನಾ.ಆರ್ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್. ಪ್ರೀತಿ ಜಾರ್ಜ್ ರವರ ಮಾರ್ಗದರ್ಶನದೊಂದಿಗೆ, ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಿಯೋಜಿತ ಕಬ್ ಮಾಸ್ಟರ್ ಸುದರ್ಶನ್ ಹಾಗೂ ಫ್ಲಾಕ್ ಲೀಡರ್ ಕುಸುಮರವರು ಇವರಿಗೆ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here