ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಕೆ.ಎಸ್. ಎಮ್.ಸಿ.ಎ ವತಿಯಿಂದ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ

0

ಕಾಯರ್ತಡ್ಕ: ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಬಟ್ಯಾಲ್ ಸಂತ ಮರಿಯಮ್ಮನವರ ದೇವಾಲಯದ ಲ್ಲಿ ಕೆ.ಎಸ್. ಎಮ್. ಸಿ.ಎ ವತಿಯಿಂದ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು.

ಧರ್ಮ ಕೇಂದ್ರದ ನಿವೃತ್ತ ಸೈನಿಕನಾದ ಸಿಂಡೋಯ್ ಇಪನ್ ಅವರ ಅನುಪಸ್ಥಿತಿಯಲ್ಲಿ ಯೋಧನ ಹೆತ್ತವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮ ದಲ್ಲಿ ಧರ್ಮ ಕೇಂದ್ರದ ಧರ್ಮ ಗುರು ವಂ.ಫಾ.ಜೋಸೆಫ್ ವಾಲೂಕಾರನ್, ಕೆ ಸ್ ಮ್ ಸಿ ಎ ವಲಯ ಅಧ್ಯಕ್ಷ ಜೈಸನ್ ಪಟ್ಟೆರಿಲ್, ಘಟಕ ಅಧ್ಯಕ್ಷ ಜೋಮೇಶ್ ಕೆ ಜೆ, ಟ್ರಸ್ಟಿಗಳಾದ ಸಂತೋಷ್ ಕಾರೆಕ್ಕೆಲ್, ಬಿನೋಯ್ ಆದಪಲ್ಲಿ, ಜೋಬಿ ಪದುಪಲ್ಲಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here