ನೆರಿಯ: ವಿವಿಧ ಕಡೆಯಲ್ಲಿ ಪ್ರಕೃತಿ ವಿಕೋಪ- ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ- ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರೀಶಿಲನೆ

0

ನೆರಿಯ: ವಿವಿಧ ಕಡೆಯಲ್ಲಿ ಪ್ರಕೃತಿ ವಿಕೋಪಕ್ಕೆ ಹಾನಿ ಆಗಿರುವ ಮನೆಗೆ ಹಾಗೂ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡ ಅಂಬಟೆಮಲೆ ಪ್ರದೇಶಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು ಹಾಗೂ ಎರಡು ಮನೆಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ವಿತರಣೆ ಮಾಡಿದರು.ನೆರಿಯ ನಿರಂತರವಾಗಿ ಸುರಿಯುವ ಗಾಳಿ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ ಕಳೆದ 4 ವರ್ಷಗಳ ಹಿಂದೆ ಸುರಿದ ಮಳೆ ಮತ್ತೆ ನೆನಪಿಸುತ್ತಿದೆ.

ಕೋಲೋಡಿ ಎಂಬಲ್ಲಿ ಮನೆ ಹತ್ತಿರ ಗುಡ್ಡ ಕುಸಿತ ಸಂಭವಿಸಿವ ಕೃಷ್ಣಪ್ಪ ಮಲೆಕುಡಿಯ ಹಾಗೂ ಶಾಂತಿಗುಡ್ಡೆ ನಿವಾಸಿ ಮೋಹನ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾದ್ಯಕ್ಷೆ ಸಜಿತಾ, ಸದಸ್ಯರಾದ ವೇದಾವತಿ, ಪಿ.ಮಹಮ್ಮದ್, ರಮೇಶ್ ಕೆ.ಎಸ್, ಮಾಲತಿ, ತೋಮಸ್, ಅಭಿವೃದ್ಧಿ ಅಧಿಕಾರಿ ಸುಮಾ, ಪಂ.ಸಿಬ್ಬಂದಿ ಮಧುಮಾಲ ಉಪಸ್ಧರಿದ್ದರು.

LEAVE A REPLY

Please enter your comment!
Please enter your name here