ಬೆಳ್ತಂಗಡಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸತೀಶ್ ಕೆ.ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ಭಂಡಾರಿ ನಾರಾವಿ ಅವಿರೋಧವಾಗಿ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಜು.18ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸತೀಶ್ ಕೆ.ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ನಾರಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಿರಿಸಿದ ಸ್ಥಾನದಿಂದ ಬೆಳ್ತಂಗಡಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ, ಬೆಳ್ತಂಗಡಿ ಇದರ ಆಡಳಿತ ಮಂಡಲಿಗೆ ಮುಂದಿನ ಐದು ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನದ ಚುನಾವಣೆ ಜು.14ರಂದು ಈ ಕೆಳಕಂಡ ಅಭ್ಯರ್ಥಿಗಳು ಅವಿರೋಧವಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮ 14ಜಿ ಉಪಬಂಧಾನುಸಾರ ಸ್ಥಾನದಿಂದ ಕ್ರಮಬದ್ಧವಾಗಿ ಆಯ್ಕೆಯಾಗಿದ್ದರು.

ಸತೀಶ್ ಕೆ.ಕಾಶಿಪಟ್ಣ, ಸುಂದರ ಗೌಡ ಇಚ್ಚಿಲ ಉಜಿರೆ, ಮಹಾವೀರ ಜೈನ್ ನಾರಾವಿ, ದುಗ್ಗಪ್ಪ ಗೌಡ ತಣ್ಣೀರುಪಂಥ, ಸಂಜೀವ ಎಲ್ ನಾರಾವಿ, ಪ್ರಶಾಂತ್ ಬಿ ಬಡಕೋಡಿ, ಎನ್ ದಿವಾಕರ ಭಂಡಾರಿ ನಾರಾವಿ, ಪ್ರವೀಣ್ ಗಿಲ್ಬರ್ಟ್ ಪಿಂಟೋ ಕಾಶಿಪಟ್ಣ, ಸವಿತಾ ರಾಜೇಶ್ ಶೆಟ್ಟಿ ಪೆರಾಡಿ, ಗುಣವತಿ ಕುಕ್ಕೇಡಿ ಇವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಚುನಾವಣಾ ಉಸ್ತುವಾರಿಯಾಗಿ ಶೇಖರ್ ಕುಕ್ಕೇಡಿ ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ಪ್ರತಿಮಾ ಇವರು ಭಾಗವಹಿಸಿ, ಚುನಾವಣಾ ಪ್ರಕೀಯೆ ನಡೆಸಿದರು.ಸಂಘದ ಕಾರ್ಯದರ್ಶಿ ಆದರ್ಶ್ ಜೈನ್ ಸಹಕರಿಸಿದರು.

LEAVE A REPLY

Please enter your comment!
Please enter your name here