ಡೆಂಗ್ಯೂ ವಿರೋಧ ಮಾಸಾಚಾರಣೆ ಪ.ಪಂ.ವ್ಯಾಪ್ತಿಯ ಮನೆ ಮನೆಗೆ ಭೇಟಿ

0

ಬೆಳ್ತಂಗಡಿ: ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಉತ್ಪತ್ತಿ ತಾಣ ನಾಶ ಹಾಗೂ ಮುಂಜಾಗೃತ ಕ್ರಮದ ಕುರಿತು ಜು.12ರಂದು ಮಾಹಿತಿ ನೀಡಲಾಯಿತು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಮತ್ತು ಸಿಬ್ಬಂದಿಗಳೊಂದಿಗೆ ಮುಂಜಾಗೃತೆ ವಹಿಸಿವಂತೆ ಮನೆ ಭೇಟಿ ನೀಡಿ ಮಾಹಿತಿ ನೀಡಿದರು. ಮಳೆ ಕಡಿಮೆಯಾದಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಸ್ಪ್ರೇ ಹಾಗೂ ಫಾಗಿಂಗ್ ಮಾಡಲಾಗುವುದು ಎಂದು ಪ.ಪಂ.ಮುಖ್ಯಾಧಿಕಾರಿ ರಾಜೇಶ್ ಕೆ. ತಿಳಿಸಿದರು.

ಸಿಬ್ಬಂದಿಗಳು ಜನರಿಗೆ ಉತ್ಪತ್ತಿ ತಾಣ ನಾಶದ ಕುರಿತು ಮನದಟ್ಟು ಮಾಡಿದರು.

LEAVE A REPLY

Please enter your comment!
Please enter your name here