ಬಂಟ್ವಾಳದಲ್ಲಿ ಅಪಘಾತ: ಪುದುವೆಟ್ಟಿನ ಯುವಕ ಸಾವು

0

ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜು.15ರಂದು ಮೃತಪಟ್ಟಿದ್ದಾರೆ.

ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ – ಮೀನಾಕ್ಷಿ ದಂಪತಿ ಪುತ್ರ ಗಣೇಶ್ (39 ವ) ಮೃತಪಟ್ಟವರು. ಟ್ಯಾಂಕರ್ ಚಾಲಕ ಮಹಮ್ಮದ್ ಆಸಿಫ್ ಎಂಬಾತ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ಗಣೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದರು. ಅವರನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ವಿದೇಶದಿಂದ ಪತ್ನಿ ವಾಪಸ್: ಪತ್ನಿಯ ಮನೆ ವೇಣೂರಿನಲ್ಲಿದ್ದು, ಗಣೇಶ್ ಅಲ್ಲಿಯೇ ವಾಸವಾಗಿದ್ದರು. ಪತ್ನಿ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು, ಘಟನೆಯ ಬಳಿಕ ವಾಪಸ್ಸಾಗಿದ್ದಾರೆ.

ಗಣೇಶ್ ಅವರು ಪತ್ನಿ ಪೂರ್ಣಿಮಾ, ತಂದೆ, ತಾಯಿ, ಸಹೋದರ ಯಶೋಧರ, ಸಹೋದರಿ ಪ್ರಮೀಳಾರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here