ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಶ್ರವಣ್ ಕುಮಾರ್ ನೇಮಕ

0

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ತಣ್ಣೀರುಪಂತ ಪಂಚಾಯತ್ ಪಿಡಿಒ ಶ್ರವಣ್ ಕುಮಾರ್ ಅವರನ್ನು ದೇವಳದ ಆಡಳಿತ ಮಂಡಳಿಯಿಂದ ನೇಮಕ ಮಾಡಲಾಯಿತು.ದೇವಸ್ಥಾನದ ವ್ಯವಸ್ಥಾಪನದ ಅಧ್ಯಕ್ಷರಾಗಿದ್ದ ಭುವನೇಶ್ ಗೇರುಕಟ್ಟೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಜನಾರ್ದನ ಪೂಜಾರಿ, ವಸಂತ ಮಜಲು, ದಿನೇಶ್ ಗೌಡ ಕೆ., ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಂಬಾ ಆಳ್ವ, ಪ್ರಧಾನ ಅರ್ಚಕ, ಸದಸ್ಯ ರಾಘವೇಂದ್ರ ಅಸ್ರಣ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರ. ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ದೇವಳದ ಪ್ರಬಂಧಕ ಗಿರೀಶ್ ಶೆಟ್ಟಿ, ಸಹ ಅರ್ಚಕ ನಾಗರಾಜ್ ಭಟ್, ಪದಾರ್ಥಿ ಶೀನ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here