ಬೆಳ್ತಂಗಡಿ: ಧಾರಾಕಾರ ಮಳೆಗೆ ಹಾನಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನದ್ಯಾಂತ ಜೂ.26ರಂದು ಬೆಳಗ್ಗಿನಂದಲೇ ಧಾರಕಾರ ಮಳೆ ಸುರಿದಿದೆ. ತಾಲೂಕಿನಲ್ಲಿ ಬಿರುಸುಗೊಂಡ ಮಳೆಗೆ ಹಲವೆಡೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗುಂಡೂರಿ ಗ್ರಾಮದ ದಿನೇಶ ಕುಂಜಿರ ಪೂಜಾರಿರವರ ಮನೆಯ ಪಕ್ಕದ ಗುಡ್ಡೆ ಕುಸಿದಿದ್ದು ಮನೆಯವರನ್ನು ಸ್ಥಳಾಂತರಿಸಲಾಗಿದೆ.

ಹೊಸಂಗಡಿ ಗ್ರಾಮದ ಮರಿಯಮ್ಮರವರ ಮನೆಯ ಶೀಟು ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ನಿವಾಸಿ ಆಮೀನಮ್ಮರವರ ವಾಸ್ತವ್ಯದ ಮನೆಗೆ ತಾಗಿಕೊಂಡಿರುವ ಶೌಚಾಲಯದ ಒಂದು ಬದಿ ಕುಸಿದಿದೆ. ಕುಕ್ಕೇಡಿ ಗ್ರಾಮದ ರಮ್ಲತ್ ಅವರ ಮನೆಯ ಹಿಂಬದಿಯ ಗೋಡೆ ಕುಸಿದ ಘಟನೆ ನಡೆದಿದೆ. ಕಾಶಿಪಟ್ಣ ಗ್ರಾಮದ ಬಾಬು ದೂಜ ನಲ್ಕೆ ಅವರ ಮನೆಯ ಬದಿಯ ಮಣ್ಣು ಜರಿದು ಹಾನಿಯಾಗಿದೆ.

LEAVE A REPLY

Please enter your comment!
Please enter your name here