ಡೆಂಗ್ಯೂ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದ ಬದ್ಯಾರು ನಿವಾಸಿ ದಿವಾಕರ ಶೆಟ್ಟಿ ಅಸ್ವಸ್ಥಗೊಂಡು ನಿಧನ

0

ಬದ್ಯಾರು: ಬದ್ಯಾರು ಮಲ್ಯೋಡಿ ನಿವಾಸಿ ದಿವಾಕರ ಶೆಟ್ಟಿ (50ವ) ಡೆಂಗ್ಯೂ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದು ಅಸ್ವಸ್ಥಗೊಂಡು ನಿಧನರಾದರು.

ಬೆಳ್ತಂಗಡಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಉದ್ಯೋಗದಲ್ಲಿದ್ದ ಇವರು ಡೆಂಗ್ಯೂ ಜ್ವರ ಬಾಧಿಸಿದ ಕಾರಣ ಕೆಲಸಕ್ಕೆ ರಜೆ ಹಾಕಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಮನೆಯಲ್ಲಿದ್ದ ಅವರು ಕಸ ಬಿಸಾಡಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದರೆನ್ನಾಲಾಗಿದೆ.ತಕ್ಷಣ ಆಸ್ಪತ್ರೆಗೆ ತಂದರೂ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ದಿವ್ಯಾ, ಎರಡು ಗಂಡು ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here