ಗರ್ಡಾಡಿಯ ಬೋಳಿಯಾರ್ ನಲ್ಲಿ ಗೇಟಿನೆದುರು 25 ಮೇಕೆಯ ತಲೆಕಡಿದು ವಾಮಾಚಾರ: ಪ್ರಮುಖರ ಫೋಟೋ ಬಳಕೆ: ಆತಂಕದಲ್ಲಿ ಸ್ಥಳೀಯರು

0

ಗರ್ಡಾಡಿ: ಇಲ್ಲಿನ‌ ಬೋಳಿಯಾರ್ ನ ಗೋಪಕುಮಾರ್ ಮತ್ತು ಸುಮೇಶ್ ಕುಮಾರ್ ರವರಿಗೆ ಸೇರಿದ ಜಮೀನಿನ ಗೇಟಿನೆದುರು 25 ಮೇಕೆಯ ತಲೆ ಕಡಿದು ವಾಮಾಚರ ನಡೆಸಿರುವ ಘಟನೆ ನಡೆದಿದೆ.ಗೇಟಿನೆದುರು ಮೇಕೆಯ ತಲೆಗಳ ಜೊತೆ ಆ ಕುಟುಂಬದವರ ಫೋಟೋ, ಕೆಲಸದವರ ಫೋಟೋ, ಸಮಾಜದಲ್ಲಿರುವ ಪ್ರಮುಖರ ಫೋಟೋ ಬಳಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಜಾಗದ ವಿಚಾರದಲ್ಲಿಯೇ ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಗೋಪಕುಮಾರ್ ರವರಿಗೆ ಸೇರಿದ ಜಾಗವನ್ನು ಮಂಗಳೂರಿನ್ ರಾಜೇಶ್ ಎಂಬಾತ ಒಳಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದು, ಈ ಹಿನ್ನಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ ಎಂದು‌‌ ಈ ಜಾಗದ ಮ್ಯಾನೇಜರ್ ಲಿಬಿನ್ ಸುದ್ದಿಗೆ ತಿಳಿಸಿದ್ದಾರೆ.

ಇದಷ್ಟೇ ಅಲ್ಲದೇ ಒಂದು ವಾರದ ಹಿಂದೆ 25 ಮೊಟ್ಟೆ, ಹಂದಿಯ ಮುಖ ಬಳಸಿ ವಾಮಾಚಾರ ಇದೇ ಜಾಗದಲ್ಲಿ ಮಾಡಿಸಿದ್ದರು.ಈಗ ಮತ್ತೆ ಮೇಕೆಯ ತಲೆ ಕಡಿದು ಹಾಕಿ ವಾಮಾಚಾರ ಮಾಡಿರುವುದು ಅಚ್ಚರಿಗೆ ಕಾರಣವಾಗಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಅಲ್ಲದೇ, ಪೊಲೀಸರಿಗೆ ದೂರು ನೀಡುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here