ಐಎನ್ಐ ಸಿಇಟಿನಲ್ಲಿ ಪ್ರವೇಶ ಪರೀಕ್ಷೆಯಲ್ಲಿ 679ನೇ ರ‍್ಯಾಂಕ್ ಗಳಿಸಿದ ಡಾ|ರಿತೇಶ್ ಕುಮಾರ್ ರಿಗೆ ಸನ್ಮಾನ

0

ಕೊಯ್ಯೂರು: ರಕ್ಷಾ ನವೋದಯ ಸಂಘದ ಸಭೆಯು ಅಶೋಕ್ ಕುಮಾರ್ ಬಾಂಗಿಣ್ಣಾಯರ ಮನೆ ಅಗ್ರಸಾಲೆಯಲ್ಲಿ ಸಂಘದ ಅಧ್ಯಕ್ಷ ಶಿವಶಂಕರ ಪ್ರಭು ರವರ ಅಧ್ಯಕ್ಷತೆಯಲ್ಲಿ ಜೂ.03ರಂದು ಜರಗಿತು.

ಸಂಘದ ಕಾರ್ಯದರ್ಶಿ ಕೆ.ರಾಮಣ್ಣ ಪೂಜಾರಿಯವರ ಪುತ್ರ ಡಾ|ರಿತೇಶ್ ಕುಮಾರ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥಗಳಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ ಐಎನ್ಐ ಸಿಇಟಿಯಲ್ಲಿ 697ನೇ ರ‍್ಯಾಂಕ್ ಗಳಿಸಿದ ಇವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರು, ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಕುಮಾರ್ ಭಾಂಗಿಣ್ಣಾಯ, ಪ್ರಗತಿಪರ ಕೃಷಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಮೆನೇಜರ್ ಬಿ. ಬಾಲಕೃಷ್ಣ ಪೂಜಾರಿ ಶುಭಾಸಂಸನೆ ಗೈದರು. ಸದಸ್ಯರುಗಳಾದ ಶ್ರೀಕೃಷ್ಣ ಭಟ್ ಕಾಂತಾಜೆ, ಕೇಶವ ಗೌಡ ಕೊಂಗುಜೆ, ಗುಣಕರ ರೈ ಹರ್ಮಾಡಿ, ನಾರಾಯಣ ಗೌಡ ಪೂರ್ಯಾಳ, ರಮೇಶ್ ಆಚಾರ್ಯ ಪೂಂಜೊಟ್ಟು, ಕೆ.ರಾಮಣ್ಣ ಪೂಜಾರಿ, ಧರ್ಣಪ್ಪ ಗೌಡ ಹಲೆಕ್ಕಿ, ನಿವೃತ್ತ ಶಿಕ್ಷಕಿ ಸ್ವರ್ಣಲತಾ, ದೇವಿಪ್ರಸಾದ್, ಶಾಂಭವಿ ದೇವಿಪ್ರಸಾದ್ ಉಪಸ್ಥಿತರಿದ್ದರು. ಪ್ರಚಂಡ ಭಾನು ಭಟ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here