ಬೆಳ್ತಂಗಡಿ: ಐಡಿಬಿಎಫ್ ಡಾಡ್ಜ್ ಬಾಲ್ ಫೆಡರೇಷನ್ ಕಪ್ ಟೂರ್ನಮೆಂಟ್‌ ನಲ್ಲಿ ಕರ್ನಾಟಕ ತಂಡ ತೃತೀಯ ಸ್ಥಾನ- ತಂಡದ ನಾಯಕನಾಗಿ ಇಳಂತಿಲದ ಅಭಿಶೃತ್ ಮುರ

0

ಬೆಳ್ತಂಗಡಿ: ತೆಲಂಗಾಣ ರಾಜ್ಯದಲ್ಲಿ ನಡೆದ ಐಡಿಎಫ್ ಡಾಡ್ಜ್ ಬಾಲ್ ಫೇಡರೇಷನ್ ಕಪ್-2024 ಮೇ 15,16,17 ಮೂರು ದಿನ ನಡೆದಿರುವ ಪಂದ್ಯಾಟದಲ್ಲಿ ಪುರುಷರ ವಿಭಾಗದ ಬೆಳ್ತಂಗಡಿ ತಾಲೂಕಿನ ಅಭಿಶೃತ್‌ ಇಳಂತಿಲ ಇವರ ನಾಯಕತ್ವದ ಕರ್ನಾಟಕ ತಂಡವು ತೃತೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇವರು ಇಳಂತಿಲ ಗ್ರಾಮದ ಮುರ ನಿವಾಸಿಯಾದ ಈಶ್ವರ ಶೆಟ್ಟಿ, ಮೀನಾಕ್ಷಿ ರವರ ಪುತ್ರ.

ಮೂಡಬಿದ್ರೆ ಕೊಡಂಗಲ್ಲು ಎಂ.ಕೆ. ಅನಂತ್ ರಾಜ್ ಕಾಲೇಜ್ ಆಫ್ ಫಿಸೀಕಲ್‌ ಎಜ್ಯುಕೇಶನ್ ನಲ್ಲಿ ಡಿಪಿಎಡ್ ವಿಭಾಗದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here