ಬೆಳ್ತಂಗಡಿ: ಬಸ್-ಟ್ಯಾಂಕರ್ ಅಪಘಾತ- 18ಕ್ಕೂ ಅಧಿಕ ಮಂದಿಗೆ ಗಾಯ

0

ಬೆಳ್ತಂಗಡಿ: ಬಸ್ ಮತ್ತು ಟ್ಯಾಂಕರ್ ನಡುವೆ ಮೇ 8ರಂದು ಅಪಘಾತ ನಡೆದು, 18 ಪ್ರಯಾಣಿಕರ ಸಹಿತ ಹಲವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಳ್ತಂಗಡಿಯ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ಗುಡಿ ಬಳಿ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆಯತ್ತ ಚಲಿಸುತ್ತಿದ್ದ ಕಾರ್ಕಳ ಮಾರ್ಗದ ವಿಶಾಲ್ ಬಸ್‌ಗೆ ಎದುರುಗಡೆಯಿಂದ ಬರುತ್ತಿದ್ದ ಎಚ್.ಪಿ. ಕಂಪನಿಯ ಪೆಟ್ರೋಲಿಯಂ ಉತ್ಪನ್ನ ಸಾಗಿಸುವ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಎರಡೂ ವಾಹನಗಳ ಚಾಲಕರಿಗೆ ಗಾಯವಾಗಿದೆ. ಬಸ್‌ನಲ್ಲಿದ್ದ ತಾಯಿ-ಮಗು ಸಹಿತ ಎಲ್ಲ 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಟ್ಯಾಂಕರ್‌ ಬಸ್ಸನ್ನು ತುಂಬಾ ದೂರ ತಳ್ಳಿಕೊಂಡು ಹೋಗಿದ್ದು, ಬಸ್ ರಸ್ತೆಗೆ ಅಡ್ಡಲಾಗಿ ನಿಂತಿದೆ. ಎರಡೂ ವಾಹನಗಳ ಮುಂಭಾಗದ ಗಾಜು ಒಡೆದಿದ್ದು, ಜಖಂಗೊಂಡಿದೆ.

LEAVE A REPLY

Please enter your comment!
Please enter your name here