ಶಿಬಾಜೆ ಗ್ರಾಮದ ಅಜಿರಡ್ಕದಲ್ಲಿ ಗಜಪಡೆಯಿಂದ ದಾಳಿ- ಅಪಾರ ಕೃಷಿ ನಾಶ

0

ಶಿಬಾಜೆ: ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ಮೇ 7ರಂದು ತಡರಾತ್ರಿ ಗಜಪಡೆ ಕಾಲಿಟ್ಟು ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ.

ಈ ಹಿಂದೆಯೂ ಇವರ ತೋಟಕ್ಕೆ ದಾಳಿ ಮಾಡಿದ್ದು, ಕೃಷಿ ಹಾನಿ ಉಂಟು ಮಾಡಿತ್ತು.

ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ದಾಳಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here