ಕಾಂಗ್ರೆಸ್ ನ ಗ್ಯಾರಂಟಿ-ಬೂತ್ ಬಲವರ್ಧನೆ- ಅಭ್ಯರ್ಥಿಯ ವರ್ಚಸ್ಸು- ಸಾಮರಸ್ಯದ ಮರುಸ್ಥಾಪನೆಯ ಸಂಕಲ್ಪದಿಂದ ಮಂಗಳೂರು ಲೋಕಸಭಾ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ ನಿಶ್ಚಿತ- ಸಂದೀಪ್ ನೀರಲ್ಕೆ

0

ಬೆಳ್ತಂಗಡಿ: ಸುದೀರ್ಘ ವರ್ಷಗಳಿಂದ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದ ನಮ್ಮ ಪಕ್ಷ ಈ ಬಾರಿ ಖಂಡಿತವಾಗಿಯೂ ಗೆದ್ದು ಬೀಗಲಿದೆಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳ ಕ್ಷಿಪ್ರವಾಗಿ ಜಾರಿಗೆ ಬಂದಿದೆ,ಪ್ರತೀ ಕುಟುಂಬಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಯೋಜನೆಗಳು ತಲುಪುತ್ತಿದೆ, ಉತ್ತಮ ಪ್ರತಿಕ್ರಿಯೆ ಬೆಂಬಲವೂ ವ್ಯಕ್ತವಾಗುತ್ತಿದೆ.

ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್ ರವರ ವರ್ಚಸ್ಸು, ಸಾಮಾಜಿಕ, ಧಾರ್ಮಿಕ ಸೇವೆ, ಪ್ರಬುದ್ಧ ಮಾತುಗಾರಿಕೆ, ಜನಸೇವೆಯ ತುಡಿತ ಪಕ್ಷಕ್ಕೂ ಬಲ ತಂದಿದೆ, ಕಾರ್ಯಕರ್ತರಲ್ಲೂ ಚೈತನ್ಯ ತುಂಬಿದೆ.ಸಾಮರಸ್ಯದ ಮರುಸ್ಥಾಪನೆ ಜನಸಾಮಾನ್ಯರ ಅಭಿವೃದ್ಧಿಪರ ಚಿಂತನೆ, ನಾಯಕರು, ಕಾರ್ಯಕರ್ತರ ಒಗ್ಗಟ್ಟು, ನಿಸ್ವಾರ್ಥ ಮನೋಭಾವದಿಂದ ನಿಶ್ಚಿತವಾಗಿ ಕಾಂಗ್ರೆಸ್ ಗೆಲ್ಲಲಿದೆ ಆ ಗೆಲುವು ಮಂಗಳೂರು ಲೋಕಸಭಾ ಕ್ಷೇತ್ರದ ನಾಗರಿಕರ ಗೆಲುವು ಆಗಿರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವಕ್ತಾರ ಸಂದೀಪ್ ನೀರಲ್ಕೆ ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here