ಗೇರುಕಟ್ಟೆ ಮನ್ ಶರ್ ವಿದ್ಯಾಸಂಸ್ಥೆಯಿಂದ ಬೇಸಿಗೆಯ ರಜೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ ಎಂಬ ಸಂದೇಶ

0

ಬೆಳ್ತಂಗಡಿ: ಗೇರುಕಟ್ಟೆ ಮನ್ ಶರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಫಲಿತಾoಶ ಪ್ರಕಟಣೆ ಹಾಗೂ ಪೋಷಕರ ಮಹಾಸಭೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರು ಸಾಂಕೇತಿಕವಾಗಿ ಹಕ್ಕಿಗೆ ನೀರುಣಿಸುವ ಮೂಲಕ ಜಾಗೃತಿಯ ಸಂದೇಶದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಇವರು ಪ್ರಸ್ತಾವನೆಗೈದು, ಸುಡುಬಿಸಿಲಿನ ದಾಹಕೆ ಅವೆಷ್ಟೋ ಪ್ರಾಣಿ – ಪಕ್ಷಿಗಳು ಹೈರಾಣಾಗುತ್ತಿವೆ.

ಅವುಗಳಿಗೆ ಪ್ರತಿ ಮನೆಯಲ್ಲೂ ನೀರಿಡುವ ಮೂಲಕ ದಯೆ ತೋರೋಣ.‌ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸೋಣ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here