ಬಳಂಜ: ನಾಲ್ಕೂರು ಯಕ್ಷಪ್ರಿಯ ಸಮಿತಿ ವತಿಯಿಂದ ಯಕ್ಷಗಾನ ಬಯಲಾಟ

0

ಬಳಂಜ: ಯಕ್ಷಪ್ರಿಯ ಯಕ್ಷಗಾನ ಬಯಲಾಟ ಸಮಿತಿ ನಾಲ್ಕೂರು ಬಳಂಜ ಇದರ ನೇತೃತ್ವದಲ್ಲಿ ಪ್ರಥಮ ವರ್ಷದ ಯಕ್ಷಗಾನ ಬಯಲಾಟ ಏ.4ರಂದು ನಿಟ್ಟಡೆ ಶಾಲಾ ವಠಾರದಲ್ಲಿ ಸಸಿಹಿತ್ಲು ಶ್ರೀ ಭಗವತಿ ಮೇಳದವರಿಂದ ನಡೆಯಿತು.

ಈ ಸಂದರ್ಭದಲ್ಲಿ ನಡೆದ ದೇವರ ಶೋಭಾಯಾತ್ರೆಯಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ ನಡೆಯಿತು. ಪ್ರಸಿದ್ಧ ಹಾಸ್ಯ ಯಕ್ಷಗಾನ ಕಲಾವಿದರಾದ ಸುಂದರ ಬಂಗಾಡಿಯವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಖಂಡಿಗ, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಅಮೀನ್ ಬಳಂಜ, ಸಮಿತಿಯ ಕೋಶಾಧಿಕಾರಿ ಪುರಂದರ ಪೆರಾಜೆ, ಹರೀಶ್ ಮಜ್ಜೆನಿ ಸತೀಶ್ ಬಿ.ಬಳಂಜ, ಎಚ್ ದರ್ಣಪ್ಪ ಪೂಜಾರಿ, ತಿಮ್ಮಪ್ಪ ಪೂಜಾರಿ ನಿಟ್ಟಡ್ಕ, ಬಳಂಜ ಬಿಲ್ಲವ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಹರೀಶ್ ವೈ ಚಂದ್ರಮ, ಸಮಿತಿಯ ಗೌರವ ಸಲಹೆಗಾರರು, ಸಮಿತಿಯ ಉಪಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಆಗಮಿಸಿದ ಎಲ್ಲರನ್ನು ಸಮಿತಿಯ ಅಧ್ಯಕ್ಷರಾದ ಸಂಜೀವ ಶೆಟ್ಟಿ ಮತ್ತು ಕಾರ್ಯದರ್ಶಿ ರವೀಂದ್ರ ಅಮೀನ್ ಮತ್ತು ಸಮಿತಿಯ ಸದಸ್ಯರು ಸ್ವಾಗತಿಸಿದರು.

ಸದಾನಂದ ಸಾಲಿಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here