ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ 108 ಕಾಯಿ ಗಣಪತಿ ಹೋಮ, ಸಾಮೂಹಿಕ ಶನೈಶ್ಚರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ

0

ನಡ: ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಎ.6ರಂದು 108 ತೆಂಗಿನಕಾಯಿ ಗಣಪತಿ ಹೋಮ, ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಬೆಳಿಗ್ಗೆ ಪುಣ್ಯಾಹ ವಾಚನ, ಯಂತ್ರ ಪೂಜೆ, ಅಗ್ನಿ ಪ್ರತಿಷ್ಠೆ, ಗಂಗಾ ಪೂಜೆ, ಕಲಶ ಪ್ರತಿಷ್ಠೆ ನಡೆದು ಬಳಿಕ ಹೋಮದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅಂನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೋಕ್ತೆಸರ ಕೆ.ರಾಧಾಕೃಷ್ಣ ಹೊಳ್ಳ, ಧಾ. ಕಾ. ಅ.ಸಮಿತಿ ಅಧ್ಯಕ್ಷ ಗಣೇಶ್ ಭಟ್, ಕಾರ್ಯದರ್ಶಿ ಪದ್ಮನಾಭಾ ಗೌಡ ಬರ್ಕೆ, ಕೋಶಾಧಿಕಾರಿ ವಿವೇಕಾನಂದ ನಂದ ಗೌಡ ಭೋಜಾರ, ಸಮಿತಿ ಸದಸ್ಯರು, ಅರ್ಚಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡ, ಕನ್ಯಾಡಿ, ಲಾಯಿಲ, ವಾರ್ಷಿಕ ಉತ್ಸವ ಸಮಿತಿ ಪದಾಧಿಕಾರಿಗಳು, ಕುತ್ರೊಟ್ಟು ದೊಂಪದಬಲಿ ಸಮಿತಿ ಪದಾಧಿಕಾರಿಗಳು ಊರವರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here