ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ 135ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

0

ಮಿತ್ತಬಾಗಿಲು: ಸ್ಪಂದನಾ ಸೇವಾ ಸಂಘದ 135ನೇ ಸೇವಾ ಯೋಜನೆಯ ಧನ ಸಹಾಯವನ್ನು ಆರ್ಥಿಕ ಸಂಕಷ್ಟದಲ್ಲಿದ್ದು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಪುಣ್ಕೆದಪ್ಪು ನಿವಾಸಿ ರತ್ನಾ ಇವರ ವಿಶೇಷ ಚೇತನಾ ಮಗನಾದ ಶ್ರೀನಿವಾಸ ಅವರಿಗೆ ಆರ್ಥಿಕ ಸಹಾಯಾರ್ಥವಾಗಿ ರೂ.15000/-ದ ಚೆಕ್ಕನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಕೊಕ್ಕಡದ ಪುರಂದರ ಗೌಡ ಕಡೀರ ಇವರ ಮೂಲಕ ಫಲಾನುಭವಿಯ ತಾಯಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ ಕೊಯ್ಯರು, ವಾಣಿ ಸೌಹಾರ್ದ ಕೋ- ಆಪರೇಟೀವ್ ಸೊಸೈಟಿಯ ನಿರ್ದೇಶಕ ಸುರೇಶ್ ಗೌಡ ಕೌಡಂಗೆ, ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ, ಸ್ಪಂದನಾ ಸೇವಾ ಸಂಘದ ಸದಸ್ಯರುಗಳಾದ ಸೀತಾರಾಮ ಸೌರಭ ಬೆಳಾಲು, ತೀರ್ಥೇಶ್ ಸವಣಾಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here